Advertisement

ಕೊಟ್ಟಿರುವ ಖಾತೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇನೆ : ಸಿ.ಟಿ.ರವಿ

09:51 AM Feb 05, 2020 | sudhir |

ಬೆಂಗಳೂರು : ಕೊಟ್ಟಿರುವ ಖಾತೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇನೆ. ನಾನು ತ್ಯಾಗಿಯೂ ಅಲ್ಲ, ಪರಮ ಸ್ವಾರ್ಥದ ರಾಜಕಾರಣಿಯೂ ಅಲ್ಲ. ತತ್ವನಿಷ್ಠ ರಾಜಕಾರಣಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

Advertisement

ಸಚಿವ ಸಂಪುಟ ವಿಸ್ತರಣೆ ಸಂಬಂಧ ಸುದ್ದಿಗಾರರೊಂದಿಗೆ ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೊಟ್ಟಿರುವ ಖಾತೆಯನ್ನು ಸದ್ಯ ಚೆನ್ನಾಗಿ ನಿರ್ವಹಿಸುತ್ತಿದ್ದೇನೆ. ಇದೊಂದು ರಿಲೇ ಓಟವಿದ್ದಂತೆ ಎಂದು ವಿಶ್ಲೇಷಿಸಿದರು.

ಇಲ್ಲಿ ಎದುರಾಗಿಳು ಮಾತ್ರವಲ್ಲ. ಎಡ-ಬಲದ ನಡುವೆಯೂ ಹೋರಾಟ ಮಾಡಬೇಕಾಗುತ್ತದೆ. ಕಷ್ಟದ ಸಂದರ್ಭದಲ್ಲಿ ಸತ್ವದ ಪರೀಕ್ಷೆಯಾಗುತ್ತದೆ. ಅದನ್ನು ಎದುರಿಸುತ್ತಿದ್ದೇನೆ. ಸಚಿವಸ್ಥಾನ ಸಿಗದೇ ಇದ್ದಾಗ ಎಲ್ಲಿ ಅಸಮಾಧಾನ ವ್ಯಕ್ತಪಡಿಸಬೇಕೋ ಅಲ್ಲಿ ವ್ಯಕ್ತಪಡಿಸಿದ್ದೇನೆ. ತತ್ವ, ನಿಷ್ಠೆಯನ್ನು ತೋರಿಸಿದ್ದೇನೆ ಎಂದು ಹೇಳಿದರು.

ಸಚಿವಾಕಾಂಕ್ಷಿಗಳ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಅವರ ಭಾವನೆ ಅರ್ಥವಾಗುತ್ತದೆ. ಅವರ ಬಗ್ಗೆ ಸಹನಭೂತಿಯೂ ಇದೆ. ಮುಖ್ಯಮಂತ್ರಿಯವರೇ ಈ ಸಂಬಂಧ ಎಲ್ಲ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next