Advertisement

ನಾನು ಯಾವಾಗಲೂ ಭಾಜಪ ಪರ: ಪ್ರೋ. ಡಾ.ಚಿದಾನಂದ ಮೂರ್ತಿ

02:59 PM Oct 02, 2019 | Mithun PG |

ಗಂಗಾವತಿ: ನಾನು ಯಾವಾಗಲೂ ಭಾರತೀಯ ಜನತಾ ಪಾರ್ಟಿಯ ಪರವಾಗಿದ್ದು ನೀವು ಜನರ ಕೆಲಸ ಮಾಡುವ ಮೂಲಕ ಪ್ರಧಾನಿ ಮೋದಿ ಹಾಗೂ ಭಾಜಪಕ್ಕೆ ಒಳ್ಳೆಯ ಹೆಸರು ತರಬೇಕೆಂದು ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿಯವರಿಗೆ ಖ್ಯಾತ ಸಾಹಿತಿ ಸಂಶೋಧಕ ಪ್ರೋ.ಡಾ.ಚಿದಾನಂದ ಮೂರ್ತಿ ಕಿವಿಮಾತು ಹೇಳಿದರು.

Advertisement

ನಗರದ ಲಯನ್ಸ್ ಭವನದಲ್ಲಿ ಶಾಸಕರಿಂದ ಸನ್ಮಾನ ಸ್ವೀಕರಿಸಿ ಮುನವಳ್ಳಿಯವರನ್ನು ಹತ್ತಿರ ಕರೆದು ಈ ಮಾತನ್ನು ಹೇಳಿದರು. ದೇಶ ಹಾಗೂ ಧರ್ಮದ ಉಳುವಿಗಾಗಿ ಪ್ರತಿಯೊಬ್ಬರು ಕೆಲಸ ಮಾಡಬೇಕಿದೆ ಎಂದರು. ಈ ಮಾತಿಗೆ ಶಾಸಕ ಪರಣ್ಣ ಮುನವಳ್ಳಿಯವರು ಡಾ.ಚಿದಾನಂದ ಮೂರ್ತಿ ಯವರ ಕಾಲಿಗೆ ನಮಸ್ಕಾರ ಮಾಡಿ ನೀವು ಹೇಳಿದಂತೆ ಮಾಡುವುದಾಗಿ ತಲೆ ಅಲ್ಲಾಡಿಸಿದರು.

ಕಮ್ಮಟ ದುರ್ಗಾ ಕ್ಕೆ ಚಿದಾನಂದ ಮೂರ್ತಿ ಭೇಟಿ:

ನಾಡಹಬ್ಬ ಮಹಾನವಮಿ ದಸರಾ ಹಬ್ಬ ಮೊದಲು ತಾಲೂಕಿನ ಕಮ್ಮಟ ದುರ್ಗ ದಲ್ಲಿ ಆರಂಭಿಸಲಾಗಿದೆ ಎಂದು ಇತ್ತೀಚೆಗೆ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿಯ ಹಿನ್ನೆಲೆಯಲ್ಲಿ ಬುಧವಾರ ಕಮ್ಮಟ ದುರ್ಗ ಹಾಗು ಹೇಮಗುಡ್ಡ ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದು ಅಗತ್ಯ ಮಾಹಿತಿಯನ್ನು ಸಂಗ್ರಹಿಸಿದರು. ದಸರಾ ಹಬ್ಬವನ್ನು ಸರಕಾರ ಕುಮ್ಮಟದುರ್ಗದಲ್ಲಿ ಆರಂಭಿಸಿ ಹಂಪಿಯ ಮಹಾನವಮಿ ದಿಬ್ಬದ ಹತ್ತಿರ ಕೊನೆಗೊಳ್ಳುತೆ ಆಚರಣೆ ಮಾಡಲು ಸರಕಾರಕ್ಕೆ ಪತ್ರ ಬರೆಯುವುದಾಗಿ ಪತ್ರಕರ್ತರಿಗೆ ತಿಳಿಸಿದರು.

ಶಾಸಕ ಪರಣ್ಣ ಮುನವಳ್ಳಿ, ಇತಿಹಾಸ ತಜ್ಞ ಡಾ.ಶರಣಬಸಪ್ಪ ಕೋಲ್ಕಾರ್,ಡಾ.ಶಿವಕುಮಾರ ಮಾಲೀಪಾಟೀಲಗ, ರಾಜೇಶನಾಯಕ,ಕೆ.ಬಸವರಾಜ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next