Advertisement

ದಿನಂಪ್ರತಿ ಗೋ ಮೂತ್ರ ಕುಡಿಯುತ್ತೇನೆ…ಅದಕ್ಕೆ ನನಗೆ ಕೋವಿಡ್ ಬಂದಿಲ್ಲ: ಪ್ರಜ್ಞಾ ಠಾಕೂರ್

06:43 PM May 17, 2021 | Team Udayavani |

ಭೋಪಾಲ್: ಗೋ ಮೂತ್ರ ಕೋವಿಡ್ ನಿಂದ ಉಂಟಾಗುವ ಶ್ವಾಸಕೋಶದ ಕೋವಿಡ್ ಸೋಂಕನ್ನು ಗುಣಪಡಿಸುತ್ತದೆ ಎಂದು ಹೇಳಿರುವ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್, ತಾನು ಕೋವಿಡ್ ವೈರಸ್ ನಿಂದ ರಕ್ಷಿಸಿಕೊಳ್ಳಲು ಪ್ರತಿದಿನ ಗೋ ಮೂತ್ರ ಕುಡಿಯುತ್ತಿರುವುದಾಗಿ ಬಹಿರಂಗಪಡಿಸಿರುವುದಾಗಿ ವರದಿ ತಿಳಿಸಿದೆ.

Advertisement

ಒಂದು ವೇಳೆ ನಮ್ಮ ಬಳಿ ದೇಸೀ ದನದ ಗೋ ಮೂತ್ರ ಇದ್ದರೆ, ಅದನ್ನು ದಿನಂಪ್ರತಿ ಕುಡಿಯುವುದರಿಂದ ಕೋವಿಡ್ ನಿಂದ ಬರುವ ಶ್ವಾಸಕೋಶದ ಸೋಂಕನ್ನು ಗುಣಪಡಿಸುತ್ತದೆ. ನನಗೆ ತುಂಬಾ ನೋವಿದ್ದು, ದಿನಂಪ್ರತಿ ಗೋ ಮೂತ್ರ ಕುಡಿಯಲು ಆರಂಭಿಸಿದೆ. ಈಗ ನಾನು ಕೋವಿಡ್ ಗಾಗಿ ಯಾವುದೇ ಔಷಧವನ್ನು ತೆಗೆದುಕೊಳ್ಳುತ್ತಿಲ್ಲ, ನನಗೆ ಕೋವಿಡ್ ಕೂಡಾ ಇಲ್ಲ ಎಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿರುವುದಾಗಿ ವರದಿ ತಿಳಿಸಿದೆ.

ಗೋ ಮೂತ್ರ ಜೀವ ರಕ್ಷಕವಾಗಿದೆ ಎಂದು ಪ್ರಜ್ಞಾ ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಗೋ ಮೂತ್ರ ಮತ್ತು ಗೋವಿನ ಇತರ ಉತ್ಪನ್ನಗಳನ್ನು ಮಿಶ್ರಣ ಮಾಡಿ ಸೇವಿಸಿದ್ದರಿಂದ ತನ್ನ ಕ್ಯಾನ್ಸರ್ ಗುಣವಾಗಿತ್ತು ಎಂದು ಹೇಳಿಕೆ ನೀಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

2020ರ ಡಿಸೆಂಬರ್ ನಲ್ಲಿ ಪ್ರಜ್ಞಾ ಠಾಕೂರ್ ಕೋವಿಡ್ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ವೈಜ್ಞಾನಿಕವಾಗಿ ಸಾಬೀತಾಗದ ಯಾವುದೇ ಔಷಧವನ್ನು ಕೋವಿಡ್ ಗಾಗಿ ಬಳಸಬೇಡಿ ಎಂದು ವೈದ್ಯರು, ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಲೇ ಬಂದಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next