Advertisement

ನನಗೆ ಟಿಕೆಟ್ ಸಿಕ್ಕಿರುವುದು ಯಾಕೆಂದು ಗೊತ್ತಿಲ್ಲ: ಶಾಮನೂರು

09:00 AM Mar 25, 2019 | keerthan |

ಬೆಂಗಳೂರು: ದಾವಣಗೆರೆ ಲೋಕಸಭಾಕ್ಷೇತ್ರದಿಂದ ನನಗೆ ಟಿಕೆಟ್ ಸಿಕ್ಕಿರುವುದು ನನಗೆ ಆಶ್ಚರ್ಯವಾಗಿದೆ. ಮೊದಲು ವಯಸ್ಸಾಗಿದೆ ಎಂದು ಟಿಕೆಟ್ ನಿರಾಕರಿಸಿದ್ರು. ಈಗ ಟಿಕೆಟ್ ಕೊಟ್ಟಿದ್ದಾರೆ. ಇದು ಯಾಕೆ ಎಂದು ನನಗೆ ಗೊತ್ತಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹೇಳಿಕೆ ನಿಡಿದ್ದಾರೆ.

Advertisement

87 ವರ್ಷದ ಶಾಮನೂರು ಶಿವಶಂಕರಪ್ಪನವರು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರು ಕೂಡಾ ಆಗಿದ್ದಾರೆ. ದಾವಣಗೆರೆ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಶಂಕಪ್ಪ ಅವರ ಪುತ್ರ ಮಲ್ಲಿಕಾಜುನ್ ಅವರ ಹೆಸರು ಕೇಳಿ ಬಂದಿತ್ತು. ಆದರೆ ಶನಿವಾರ ಬಿಡುಗಡೆಯಾದ ಪಟ್ಟಿಯಲ್ಲಿ ಶಾಮನೂರು ಅವರನ್ನೇ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು.

ಈ ಬಗ್ಗೆ ಮಾತನಾಡಿದ ಶಾಮನೂರು, ಟಿಕೆಟ್ ಬಗ್ಗೆ ನನಗೆ ಆಶ್ಚರ್ಯವಾಗಿದೆ. ಈ ಬಗ್ಗೆ ಬೆಂಗಳೂರಿಗೆ ಹೋಗಿ ಪಕ್ಷದ ಹಿರಿಯರಲ್ಲಿ ಮಾತನಾಡುತ್ತೆನೆ. ಮಗ ಮಲ್ಲಿಕಾರ್ಜುನನಿಗೆ ಟಿಕೆಟ್ ಕೊಡಬೆಕೆಂದು ನಾನೇನು ಒತ್ತಡ ಹಾಕುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next