Advertisement

ಸಂಪುಟದಿಂದ ನನ್ನ ಕೈ ಬಿಡುವ ವಿಚಾರ ಗೊತ್ತಿಲ್ಲ: ದೇಶಪಾಂಡೆ

11:10 PM Jul 03, 2019 | Team Udayavani |

ಯಾದಗಿರಿ: “ನಾನು 50 ವರ್ಷದಿಂದ ರಾಜಕೀಯದಲ್ಲಿದ್ದು, ವಿಧಾನಸಭೆಯಲ್ಲಿ ಹಿರಿಯ ಸಚಿವ ಹಾಗೂ ಶಾಸಕನಾಗಿದ್ದೇನೆ. ಈವರೆಗೆ ನನ್ನನ್ನು ಮಂತ್ರಿ ಮಾಡುವಂತೆ ಯಾರನ್ನೂ ಕೇಳಿ ಕೊಂಡಿಲ್ಲ. ಮುಂದೆ ಕೂಡ ಕೇಳಲ್ಲ. ಸಂಪುಟದಿಂದ ನನ್ನನ್ನು ಕೈಬಿಡುವ ವಿಚಾರ ಗೊತ್ತಿಲ್ಲ’ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.

Advertisement

ಯರಗೋಳದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, “ಸಂಪುಟ ಪುನಾರಚನೆ ವೇಳೆ ನನ್ನನ್ನು ಕೈ ಬಿಡುವ ಕುರಿತು ಯಾರೂ ಸಂಪರ್ಕಿಸಿಲ್ಲ. ನನಗೆ ಯಾವ ಕಚೇರಿಯ ಸಂಪರ್ಕವೂ ಇಲ್ಲ. ಸಮಾಧಾನದಿಂದ ಇರುವಂತೆ ಹೇಳಿದರೆ ನನಗೆ ಸಂತೋಷ. ನಾನೇನು ತಲೆಕೆಡಿಸಿಕೊಳ್ಳಲ್ಲ. ಹೊಸಪೇಟೆಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸದಿರುವ ಹಿನ್ನೆಲೆಯಲ್ಲಿ ಶಾಸಕ ಆನಂದಸಿಂಗ್‌ ರಾಜೀನಾಮೆ ನೀಡಿದ್ದಾರೆ ಎಂಬ ವಿಚಾರ ನನಗೆ ಗೊತ್ತಿಲ್ಲ. ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ’ ಎಂದರು.

“80 ಕೋಟಿ ಕೊಟ್ಟರೆ ರಮೇಶ ಜಾರಕಿಹೊಳಿಯವರು ಪಕ್ಷದಲ್ಲಿಯೇ ಉಳಿಯುತ್ತಿದ್ದರು ಎಂದು ಪಿರಿಯಾಪಟ್ಟಣ ಶಾಸಕ ಕೆ.ಮಹಾದೇವ ಹೇಳಿದ್ದಾರೆ. ಆದರೆ, ಯಡಿಯೂರಪ್ಪ ತಾವು ಕುದುರೆ ವ್ಯಾಪಾರ ನಡೆಸುತ್ತಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ರಾಜಕೀಯದಲ್ಲಿ ಪುರಾವೆ ಇಲ್ಲದೇ ಮಾತನಾಡಕೂಡದು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next