Advertisement

ನಾನು 2ನೇ ಅಂಬೇಡ್ಕರ್‌ ಎಂದವರೇ ಈಗ ನನಗೆ ಎದುರಾಳಿಗಳು

11:17 PM Apr 10, 2019 | Team Udayavani |

ಕಲಬುರಗಿ: “ತಮ್ಮ ಎದೆ ಬಗೆದರೆ ಅಭಿವೃದ್ಧಿ ಹರಿಕಾರ ಮಲ್ಲಿಕಾರ್ಜುನ ಖರ್ಗೆ ಅವರಿದ್ದಾರೆ. ದೇಶದ 2ನೇ ಅಂಬೇಡ್ಕರ್‌ ಎಂಬುದಾಗಿ ಮೂರು ತಿಂಗಳ ಹಿಂದೆ ಹೇಳಿದ್ದವರೇ ಈಗ ತಮ್ಮ ಸೋಲಿಗೆ ಷಡ್ಯಂತ್ರ’ ರೂಪಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದರು.

Advertisement

ಅಫಜಲಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಸಿದ ಅವರು, “ಮೂರು ತಿಂಗಳ ಹಿಂದೆಯೂ ತಮ್ಮನ್ನು ಹಾಡಿ ಹೊಗಳುತ್ತಿದ್ದವರೇ ಈಗ ಎದುರಾಳಿ ಅಭ್ಯರ್ಥಿಯಾಗಿದ್ದಾರೆ. ಅವರ ಜತೆ ಇನ್ನೂ ಕೆಲವರು ಸೇರಿದ್ದಾರೆ. ತಾವೇ ಗೆಲ್ಲಲಾಗದವರು ನನ್ನನ್ನು ಸೋಲಿಸಲು ಸಾಧ್ಯವೇ ಇಲ್ಲ. ಕಲಬುರಗಿ ಜನ 11 ಸಲ ಗೆಲ್ಲಿಸುತ್ತಾ ಬಂದಿದ್ದಾರೆ. ಈಗಲೂ ಗೆಲ್ಲಿಸುತ್ತಾರೆ.

ಜನ ಬೆಂಬಲ ಇರುವವರೆಗೂ ಇಂತಹ ನಾಯಕರ್ಯಾರು ಏನು ಮಾಡಲಿಕ್ಕಾಗುವುದಿಲ್ಲ ಎಂದರು. ನಾನು ಸಂಸದನಾಗಿ 10 ವರ್ಷ ಏನು ಕೆಲಸ ಮಾಡಿದ್ದೇನೆ ಎನ್ನುವ ಲೆಕ್ಕ ಕೊಡುತ್ತೇನೆ. ಪ್ರಧಾನಿ ಮೋದಿ ಕಲಬುರಗಿಗೆ ಏನು ಕೊಟ್ಟಿದ್ದಾರೆಂಬುದನ್ನು ಹಾಗೂ ರಾಜ್ಯದಲ್ಲಿ ಗೆದ್ದಿರುವ 18 ಸಂಸದರು ಏನು ಮಾಡಿದ್ದಾರೆ ಎನ್ನುವ ಲೆಕ್ಕ ಕೊಡಲಿ ಎಂದು ಖರ್ಗೆ ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next