Advertisement

ನಾನು ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ: ಕೆ.ಎಸ್‌. ಈಶ್ವರಪ್ಪ

09:56 AM Dec 13, 2019 | Team Udayavani |

ಬೆಂಗಳೂರು: ಪ್ರಸ್ತುತ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ಇಲ್ಲ. ನಾನು ಆ ಹುದ್ದೆ ಕೊಡಿ ಎಂದು ಕೇಳಿಯೂ ಇಲ್ಲ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

Advertisement

ಪತ್ರಕರ್ತರ ಜತೆ ಮಾತನಾಡಿದ ಅವರು, ಸರಕಾರ ಸುಭದ್ರವಾಗಿ ಮುಂದುವರಿಯಬೇಕು. ನಮ್ಮ ಸರಕಾರ ಬರಲು ತ್ಯಾಗ ಮಾಡಿದವರಿಗೆ ನಾವು ಸ್ಥಾನಮಾನ ಕಲ್ಪಿಸಬೇಕು. ಇದೊಂದೇ ನಮ್ಮೆಲ್ಲರ ಗುರಿ. ಆ ವಿಚಾರದಲ್ಲಿ ಯಾರದೂ ಭಿನ್ನಾಭಿಪ್ರಾಯ ಇಲ್ಲವೇ ಇಲ್ಲ ಎಂದು ತಿಳಿಸಿದರು.

ಬಿಜೆಪಿಯಲ್ಲಿ ಯಾವ ರೀತಿಯ ಅಸಮಾಧಾನ, ಭಿನ್ನಾಭಿಪ್ರಾಯಕ್ಕೆ ಅವಕಾಶವೂ ಇಲ್ಲ. ಉಪ ಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ, ಚುನಾವಣೆಗೆ ಸ್ಪರ್ಧೆ ಮಾಡದ ಆರ್‌.ಶಂಕರ್‌ಗೆ ಸಚಿವ ಸ್ಥಾನ ಕೊಡಲೇಬೇಕಿದೆ. ಸೋತವರಿಗೆ ಯಾವ ಸ್ಥಾನಮಾನ ಎಂಬುದು ಹೈಕಮಾಂಡ್‌ ಮತ್ತು ಸಿಎಂ ಯಡಿಯೂರಪ್ಪ ಅವರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next