Advertisement

ನಾನು ಕನ್ನಡಿಗ; ಮೊದಲು ನನಗೆ ತಮಿಳು ಬರುತ್ತಿರಲಿಲ್ಲ

11:37 AM Dec 30, 2017 | |

ಚೆನ್ನೈ: ರಾಜಕೀಯ ಪ್ರವೇಶ ಕುರಿತಂತೆ ಕಳೆದ 6 ದಿನಗಳಿಂದ ಅಭಿಮಾನಿಗಳ ಅಭಿಪ್ರಾಯ ಸಂಗ್ರಹದಲ್ಲಿ ನಿರತರಾಗಿರುವ ತಮಿಳು ಸೂಪರ್‌ ಸ್ಟಾರ್‌ ರಜನೀಕಾಂತ್‌  ಅವರು ‘ನಾನು,ನನ್ನ ಕುಟಂಬ ಕನ್ನಡಿಗರು’  ಎಂದು ಹೇಳುವ ಮೂಲಕ ಕನ್ನಡಾಭಿಮಾನ ಮೆರೆದಿದ್ದಾರೆ.

Advertisement

ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ರಜನಿಕಾಂತ್‌ ‘ನಾನು ಕನ್ನಡಿಗ, ಕಲಿತದ್ದು ಕನ್ನಡ ಮಾಧ್ಯಮದಲ್ಲಿ. ನನಗೆ ಮೊದಲು ತಮಿಳು ಬರುತ್ತಿರಲ್ಲಿಲ್ಲ,ಇಂಗ್ಲೀಷ್‌ ಅಂತೂ ಸ್ವಲ್ಪವೂ ಬರುತ್ತಲೇ ಇರಲ್ಲಿಲ್ಲ’ ಎಂದು ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದರು. 

‘ನನಗೆ ತಮಿಳು ಚಿತ್ರರಂಗ ತಮಿಳು ಭಾಷೆಯನ್ನು ಕಲಿಸಿ, ಬೆಳಸಿತು’ ಎಂದು ಅವರು ಹೇಳಿದರು. 

ಗುರುವಾರ ಅಭಿಮಾನಿಗಳೊಂದಿಗೆ ನಡೆದ ಸಂದರ್ಶನದಲ್ಲಿ ‘ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್‌ ಅವರ ಸಾಂಗತ್ಯ ಪಡೆದಿದ್ದು ತಮ್ಮ ಪೂರ್ವ ಜನ್ಮದ ಪುಣ್ಯ’ ಎಂದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next