Advertisement

ಡಿ.ಕೆ.ಶಿವಕುಮಾರ್ ಬಗ್ಗೆ ನನಗೂ ಸಹಾನುಭೂತಿ ಇದೆ

10:44 AM Sep 01, 2019 | sudhir |

ಚಿಕ್ಕಬಳ್ಳಾಪುರ : ಕೇಂದ್ರ ಸರ್ಕಾರದ ಇಡಿ ಅಧಿಕಾರಿಗಳ ವಿಚಾರಣೆಹೆಗೆ ಒಳಪಟ್ಟಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ರವರಿಗೆ ಈ ಕಷ್ಟಕಾಲದಲ್ಲಿ ನೈತಿಕಕವಾಗಿ ಹಾಗೂ ಮಾನಸಿಕವಾಗಿ ಸಹನುಭೂತಿ ವ್ಯಕ್ತಪಡಿಸುತ್ತೇನೆಂದು ಕಾಂಗ್ರೆಸ್ ಪಕ್ಷದ ಅರ್ನಹ ಶಾಸಕ ಡಾ.ಕೆ.ಸುಧಾಕರ್ ತಿಳಿಸಿದರು.

Advertisement

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶನಿವಾರ ಮಣ್ಣಿನ ಗಣಪತಿ ಮೂರ್ತಿಗಳನ್ನು ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆವರು, ಡಿಕೆಶಿ ಪ್ರಕರಣ ಅವರ ವೈಯಕ್ತಿಕವಾದದು. ಈ ಕಾನೂನು ಹೋರಾಟದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಕಾದು ನೋಡಬೇಕಿದೆ. ಆದರೆ ಈ ಕಷ್ಟಕಾಲದಲ್ಲಿ ಅವರಿಗೆ ನಾನು ನೈತಿಕವಾಗಿ ಸಹನುಭೂತಿ ತೋರುತ್ತೇನೆಂದರು.

ಚುನಾವಣೆಗೆ ತಾಲೀಮು :
ಇತ್ತೀಚೆಗೆ ಅಷ್ಟೆ ನೂರಾರು ಮಹಿಳಾ ಸ್ವ ಸಹಾಯ ಸಂಘಗಳಿಗೆ ಚೆಕ್ ಜೊತೆಗೆ ಸೀರೆಗಳನ್ನು ವಿತರಿಸಿದ ಸುಧಾಕರ್ ಇಂದು ಗಣೇಶೋತ್ಸದ ಪ್ರಯುಕ್ತ ಉಚಿತವಾಗಿ ಗಣಪತಿ ಮೂರ್ತಿಗಳನ್ನು ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next