Advertisement

ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ವಾಕಿಂಗ್ ಹೋದ ಮೂವರು ಸ್ಥಳದಲ್ಲೇ ಮೃತ್ಯು… ನಾಲ್ವರು ಗಂಭೀರ

03:10 PM Jul 04, 2023 | Team Udayavani |

ಹೈದರಾಬಾದ್: ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ… ಬೆಳಿಗ್ಗೆ ವಾಕಿಂಗ್ ಹೊರಟವರ ಮೇಲೆ ಕಾರೊಂದು ಹರಿದು ಒಂದು ಮಗು, ಇಬ್ಬರು ಮಹಿಳೆಯರು ಸೇರಿ ಮೂರು ಮಂದಿ ಮೃತಪಟ್ಟು, ನಾಲ್ಕು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಹೈದರಾಬಾದ್ ರಂಗಾರೆಡ್ಡಿ ಜಿಲ್ಲೆಯ ಬಂಡ್ಲಗುಡದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.

Advertisement

ಪೊಲೀಸರ ಪ್ರಕಾರ, ಮೃತಪಟ್ಟವರಲ್ಲಿ ತಾಯಿ ಮತ್ತು ಮಗು ಸೇರಿದ್ದು, ಬೆಳಗಿನ ಜಾವಾ ವಾಕಿಂಗ್‌ಗೆ ಹೊರಟಿದ್ದಾಗ ವೇಳೆ ಬಂಡ್ಲಗುಡ ರಸ್ತೆಯಲ್ಲಿ ಅತೀವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ತಾಯಿ ಮತ್ತು ಮಗು ಹಾಗೂ ಮತ್ತೋರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ನಡೆದ ಬಳಿಕ ಕಾರು ಚಾಲಕ ಕಾರು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.

ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಮೂವರ ಮೃತದೇಹಗಳನ್ನು ಉಸ್ಮಾನಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಕಾರು ಅತಿವೇಗವಾಗಿ ಸಾಗುತ್ತಿತ್ತು ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿಗಳ ಮೇಲೆ ನುಗ್ಗಿದೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಘಟನೆ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next