Advertisement

ಮಳೆಗೆ ತತ್ತರಿಸಿ ಹೋದ ಹೈದ್ರಾಬಾದ್‌; ಮೂವರು ಬಲಿ 

09:55 AM Oct 03, 2017 | Team Udayavani |

ಹೈದ್ರಾಬಾದ್‌ : ಭಾರೀ ಮಳೆಯಿಂದಾಗಿ ನಗರ ತ್ತತರಿಸಿ ಹೋಗಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿ ಜನಜೀವನ ತೀವ್ರ ಅಸ್ತವ್ಯಸ್ತವಾಗಿದೆ. ಮಂಗಳವಾರ ನಗರದ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಸಾರಲಾಗಿದೆ. ಮಳೆ ಸಂಬಂಧಿತ ಅವಘಡಗಳಿಗೆ ಮೂವರು ಬಲಿಯಾಗಿದ್ದಾರೆ. 

Advertisement

ಮನೆಯ ಗೋಡೆ ಕುಸಿದು 8 ತಿಂಗಳ ಮಗು ಮತ್ತು ತಂದೆ ದಾರುಣವಾಗಿ ಸಾವನ್ನಪ್ಪಿದರೆ, ಇನ್ನೋರ್ವ ವ್ಯಕ್ತಿ ವಿದ್ಯುತ್‌ ಶಾಕ್‌ನಿಂದಾಗಿ ಸಾವನ್ನಪ್ಪಿದ್ದಾನೆ. 

ಅವಳಿ ನಗರ ಸಿಕಂದರಾಬಾದ್‌ ಮತ್ತು ಹೈದ್ರಾಬಾದ್‌ನ ಹಲವು ರಸ್ತೆಗಳಲ್ಲಿ ನೀರು ನಿಂತಿದ್ದು, ಸಂಚಾರ ಸಾಧ್ಯವಾಗದೆ ವಾಹದ ಸವಾರರು ಪರದಾಡುತ್ತಿದ್ದಾರೆ. 

ಐಟಿ ಕಂಪೆನಿಗಳಿರುವ ಸೈಬರಾಬಾದ್‌ನಲ್ಲೂ ಭಾರೀ ಮಳೆಯಿಂದಾಗಿ ಅವಾಂತರಗಳು ಸಂಭವಿಸಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. 

ನಿಶಾಶ್ರಿತರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದ್ದು, ಮಳೆ ಮುಂದುವರಿದ್ದಿದ್ದು ಜನರು ತೀವ್ರ ಆತಂಕಿತರಾಗಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next