Advertisement

Hyderbad-Karnataka 371(J) ಸಮರ್ಪಕ ಅನುಷ್ಠಾನಕ್ಕಾಗಿ ಜು.22, 23ರಂದು ಪ್ರತಿಭಟನೆ

09:17 PM Jul 13, 2024 | Team Udayavani |

ಗಂಗಾವತಿ (ಕೊಪ್ಪಳ ಜಿಲ್ಲೆ) : ಕಲ್ಯಾಣ ಕರ್ನಾಟಕ ಭಾಗದ ಪ್ರಗತಿಗಾಗಿ ಸಂವಿಧಾನದ ಕಲಂ 2013ರಲ್ಲಿ ತಿದ್ದುಪಡಿ ತಂದು ಅಂದಿನ ಸರಕಾರ ಅನುಷ್ಠಾನ ಮಾಡಿದ್ದು  ಶಿಕ್ಷಣ, ಉದ್ಯೋಗ ಇತರೆ ಸೌಕರ್ಯ ಪಡೆಯಲು ಮತ್ತು ರಾಜ್ಯ ಇತರೆ ಜಿಲ್ಲೆಗಳಲ್ಲಿಯೂ ನಿಗದಿತ ಮೀಸಲಾತಿಯ ಅನ್ವಯ ಹಕ್ಕು ಮತ್ತು ಅನುದಾನ ಪಡೆಯಲು ಅವಕಾಶವಿದ್ದು ನಿಯಮ ಜಾರಿಯಾದಾಗಿನಿಂದಲೂ 6 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಯವರು ಅಧಿಕಾರಿಗಳು ಕಲಂ 371(ಜೆ) ಅನುಷ್ಠಾನದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು ನೇಮಕಾತಿ, ವೃತ್ತಿಪರ ಶಿಕ್ಷಣ ಪ್ರವೇಶ ಸೇರಿ ಭಡ್ತಿಯ ವಿಷಯದಲ್ಲಿ ಪದೇ ಪದೇ ನ್ಯಾಯಾಲಯಕ್ಕೆ ಹೋಗುತ್ತಿದ್ದು ಇದನ್ನು ಹೋಗಲಾಡಿಸಲು ಸರಕಾರ ಅನುಷ್ಠಾನ ಸಮಿತಿ ನೇಮಕ ಮಾಡುವಂತೆ ಆಗ್ರಹಿಸಲು ಜು.22 ಅಥವಾ 23 ರಂದು ಗಂಗಾವತಿಯಲ್ಲಿ ಬೃಹತ್ ಪ್ರತಿಭಟನೆಗೆ ತೀರ್ಮಾನಿಸಲಾಗಿದೆ ಎಂದು ಅನುಷ್ಠಾನ ಹೋರಾಟ ಸಮಿತಿಯ ಸಂಚಾಲಕ ಈ ಧನರಾಜ್ ಹೇಳಿದರು.

Advertisement

ನಗರದ ಐಎಂಎ ಭವನದಲ್ಲಿ ನಗರ ಹಾಗೂ ಗ್ರಾಮೀಣ ಭಾಗದ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ  ಮೈಸೂರು, ಬೆಂಗಳೂರು ಭಾಗದ ಸಂಘಟನೆ ಯೊಂದು ಕಲಂ 371(ಜೆ) ರದ್ದು ಮಾಡುವಂತೆ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದು ಈಗಲೇ ಕಲ್ಯಾಣ ಕರ್ನಾಟಕದ ಭಾಗದವರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಭವಿಷ್ಯದಲ್ಲಿ ಸಮಸ್ಯೆಯಾಗುತ್ತದೆ. ಆದ್ದರಿಂದ ಇಡೀ ಕಲ್ಯಾಣ ಕರ್ನಾಟಕದ ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ಈಗಾಗಲೇ ೬ ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳ ಕೆಲ ಸ್ವಾಮಿಜೀಗಳು, ಮಠಾಧೀಶರು, ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಮಾಲೀಕರು ಶೇ.8 ರಷ್ಟು ಕಲ್ಯಾಣ ಕರ್ನಾಟಕದ ಮಕ್ಕಳಿಗೆ ಪ್ರವೇಶ ನೀಡಲು ಆಕ್ಷೇಪಿಸಿ ನ್ಯಾಯಾಲಯದ ಮೊರೆ ಹೋಗಿ ವಿಫಲರಾಗಿದ್ದಾರೆ.

ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವಕಾಶ ಮಾಡಿದ್ದು ಕಲಂ 371(ಜೆ) ಬಗ್ಗೆ ಆಕ್ಷೇಪಿಸುವ ಬದಲಿಗೆ ತಮಗೂ ಮೀಸಲಾತಿ ನೀಡಿ ಎಂದು ಉಳಿದವರು ಕೇಳುವುದನ್ನು ಬಿಟ್ಟು ಕಲಂ 371(ಜೆ) ರದ್ದು ಮಡುವಂತೆ ಒತ್ತಾಯಿಸುವುದು ಸಂವಿಧಾನ ವಿರೋಧಿಯಾಗಿದೆ. ವಿದರ್ಭ, ಸೌರಾಷ್ಟ್ರ, ತೆಲಂಗಾಣ ಸೇರಿ ವಿಶೇಷ ಸ್ಥಾನಮಾನ ಪಡೆದ ರಾಜ್ಯಗಳಲ್ಲಿ ಕ್ರೀಡೆಯಲೂ ಮೀಸಲು ಕಲ್ಪಿಸಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಸಂವಿಧಾನ ಕಲ್ಪಿಸಿದ ಸ್ಥಾನಮಾನಕ್ಕೂ ಕೆಲವರು ಕೊಕ್ಕೆ ಹಾಕುತ್ತಿದ್ದಾರೆ.

ಸಚಿವ ಕೆ.ಎಚ್.ಪಟೇಲ್ ಸೇರಿ ಕೆಲವರು ತಮ್ಮ ಭಾಗವನ್ನು ಕಲಂ 371(ಜೆ) ವ್ಯಾಪ್ತಿಗೆ ತರಲು ಷಡ್ಯಂತ್ರ ನಡೆಸಿ ವಿಫಲರಾಗಿದ್ದು ನಾವು ಪ್ರತಿಭಟಿಸದೇ ಹೋದರೆ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು. ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮುಖಂಡರಾದ ಸಿದ್ದರಾಮಸ್ವಾಮಿ, ತಿಪ್ಪೇರುದ್ರಸ್ವಾಮಿ, ಶೈಲಜಾ ಹಿರೇಮಠ, ಪ್ರೋ.ಕರಿಗೂಳಿ, ವೀರಭದ್ರಪ್ಪ ನಾಯಕ, ನಾರಾಯಣಪ್ಪ ನಾಯಕ, ಹನುಮಂತಪ್ಪ ನಾಯಕ, ಕೆ.ಚನ್ನಬಸಯ್ಯಸ್ವಾಮಿ, ರಾಜೇಶ್ವರಿ, ಪ್ರೋ,ಕೋಲ್ಕಾರ್ ಸೇರಿ ಕನ್ನಡ ಪರ ದಲಿತ ಹಾಗೂ ರೈತ ಸಂಘಟನೆಗಳ ಮುಖಂಡರು ಸಲಹೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next