Advertisement

Hyderabad; ಹತ್ತರ ಬಾಲಕಿಯ ಮೇಲೆ ಮುಗಿಬಿದ್ದ ಹತ್ತು ಮಂದಿ ದುರುಳರು; ಬಾಲಕಿ ಈಗ ಗರ್ಭಿಣಿ

03:47 PM Jul 04, 2024 | Team Udayavani |

ಹೈದರಾಬಾದ್: 10 ವರ್ಷ ಪ್ರಾಯದ ಬಾಲಕಿಯನ್ನು ಅಪಹರಿಸಿ ಆಕೆಗೆ ಅಮಲು ಮಿಶ್ರಿತ ಪಾನೀಯವನ್ನು ಕುಡಿಸಿದ ದುರುಳರು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ ಘಟನೆಯಲ್ಲಿ ಹೈದರಾಬಾದ್ ನಲ್ಲಿ ವರದಿಯಾಗಿದೆ. ಈ ಕೃತ್ಯದಿಂದಾಗಿ ಹತ್ತು ವರ್ಷದ ಬಾಲಕಿ ಗರ್ಭಿಣಿಯಾಗಿದ್ದು, ಘಟನೆಗೆ ಸಂಬಂಧಿಸಿ ಹತ್ತು ಮಂದಿಯನ್ನು ಬಂಧಿಸಲಾಗಿದೆ.

Advertisement

ಆರೋಪಿಗಳನ್ನು ಕಾರು ಚಾಲಕ ಚಕ್ಕೋಲು ನರೇಶ್ (26), ಎಸಿಪಿಸಿ ಕಾರ್ಯಕರ್ತ ಸಿರಿಪಂಗ ವಿಜಯ್ ಕುಮಾರ್ (23), ಕಾರ್ಮಿಕ ವಾಗ್ಮಾರೆ ಬಾಲಾಜಿ (23), ಪುರಸಭೆ ನೌಕರ ಗುಡ್ಡಂತಿ ಕೃಷ್ಣ (22), ಟಿಫಿನ್ ಸೆಂಟರ್ ಕೆಲಸಗಾರ ತೋಂಟೆ ಕಿರಣ್ ಕುಮಾರ್ (26), ಡೆಲಿವರಿ ಬಾಯ್ ಬೊಳ್ಳೆಪೋಗು ಅಜಯ್ (23), ವಾಟರ್ ಕ್ಯಾನ್ ಸಪ್ಲೈಯರ್ ಜೇಮ್ಸ್ ಕ್ಸೇವಿಯರ್ (24), ಕಾರ್ಮಿಕ ವಾಗ್ಮಾರೆ ದೀಪಕ್ (25), ಮನೆ ಕ್ಲೀನರ್ ಸಬವತ್ ಹತ್ಯಾ ನಾಯ್ಕ್ (25), ಟೀ ಮಾಸ್ಟರ್ ಇಂಜಮುರಿ ಮಧು (30) ಎಂದು ಗುರುತಿಸಲಾಗಿದೆ.

ಜೂನ್ 25ರಂದು ಈ ಘಟನೆ ನಡೆದಿದೆ. ಅಂದು ನಗರದ ಕಾಚಿಗುಡ್ಡ ಪ್ರದೇಶದ ನರೇಶ್ ಮತ್ತು ವಿಜಯ್ ಕುಮಾರ್ ಎಂಬವರು ಬಾಲಕಿಯನ್ನು ಅಪಹರಿಸಿದ್ದಾರೆ. ಈ ಇಬ್ಬರು ಇತರರನ್ನು ಸೇರಿಸಿಕೊಂಡು ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ದೌರ್ಜನ್ಯ ನಡೆಸಿ ಆಕೆಗೆ ಅಮಲು ಬರುವ ಪಾನೀಯ ನೀಡಿದ್ದಾರೆ.

ಬಳಿಕ ಆಕೆಯ ಮೇಲೆ ಮುಗಿಬಿದ್ದ ಈ ಹತ್ತು ಮಂದಿ ಮೃಗಗಳಂತೆ ವರ್ತಿಸಿದ್ದಾರೆ. ಪರಿಣಾಮ ಬಾಲಕಿ ಇದೀಗ ಗರ್ಭಿಣಿಯಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರು ಮೊಬೈಲ್ ಫೋನ್ ಗಳು, ಸ್ಕೂಟರ್ ಮತ್ತು ಬೈಕ್ ಗಳು, ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಜೂನ್ 29ರಂದು ಬಂಧಿಸಲ್ಪಟ್ಟ ಎಲ್ಲಾ ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿರುವವರು ಎಂದು ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next