Advertisement

165 ಪ್ರಯಾಣಿಕರ ಪ್ರಾಣ ಉಳಿಸಿದ ಪೈಲಟ್‌

12:30 PM Nov 15, 2017 | Team Udayavani |

ವಿಶಾಖಪಟ್ಟಣ: ಪೈಲಟ್‌ನ ಸಮಯಪ್ರಜ್ಞೆಯಿಂದಾಗಿ ಭಾನುವಾರ ರಾತ್ರಿ ವಿಶಾಖಪಟ್ಟಣಂನಿಂದ ಹೈದರಾಬಾದ್‌ಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿದ್ದ 165 ಪ್ರಯಾಣಿಕರ ಪ್ರಾಣ ಉಳಿದಿದೆ. 

Advertisement

ಭಾನುವಾರ ರಾತ್ರಿ 10:30ಕ್ಕೆ ನಿಲ್ದಾಣದ ರನ್‌ವೇನಲ್ಲಿ ಸಾಗಿಬಂದ ವಿಮಾನ, ಇನ್ನೇನು ಹಾರಬೇಕೆನ್ನುವಷ್ಟರಲ್ಲಿ ರನ್‌ವೇನಲ್ಲಿದ್ದ ಗುಂಡಿಯನ್ನು ಹಾರಿಸಿಕೊಂಡು ಸಾಗಿದೆ. ಕತ್ತಲಾಗಿದ್ದರಿಂದ ಗುಂಡಿ ಪೈಲಟ್‌ಗೆ ಕಂಡಿಲ್ಲ. ಆದರೂ, ಗಾಲಿಗಳಿಗೆ ಏನೋ ಬಡಿಯಿತು ಎಂಬುದು ಪೈಲಟ್‌ ಅರಿವಿಗೆ ಬಂದಿದೆ. ಟೇಕಾಫ್ ಆದ ನಂತರ ಗಾಲಿಗಳು ಮಡಚಿಕೊಳ್ಳದ್ದನ್ನು ಗಮನಿಸಿದ ಪೈಲಟ್‌ ವಿಮಾನವನ್ನು ನಿಯಮಗಳನುಸಾರ ಪುನಃ ಇಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next