Advertisement

ಬೇರೊಬ್ಬರ ಜತೆ ಪತ್ನಿ ಆತ್ಮೀಯತೆ: ಪತಿ ಆತ್ಮಹತ್ಯೆ  

02:52 PM Feb 22, 2023 | Team Udayavani |

ಬೆಂಗಳೂರು: ಪತ್ನಿ ಪರಪುರುಷನ ಜತೆ ಆತ್ಮೀಯತೆ ಹೊಂದಿದ್ದಾಳೆ ಎಂದು ಅನುಮಾನಗೊಂಡ ಪತಿಯೊಬ್ಬ ಪಿನಾಯಿಲ್‌ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಯಾಲಿಕಾವಲ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಕೆ.ಆರ್‌.ಪುರ ನಿವಾಸಿ ವಿನೋದ್‌ ಕುಮಾರ್‌ (32) ಮೃತರು. ವಿನೋದ್‌ ಕುಮಾರ್‌ ವೈಯಾಲಿಕಾವಲ್‌ ನಿವಾಸಿ ನಿರ್ಮಲಾರನ್ನು 10 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.

ಈ ಮಧ್ಯೆ ಪತ್ನಿ ನಿರ್ಮಲಾ ಪರಪುರುಷನ ಜತೆ ಆತ್ಮೀಯತೆ ಹೊಂದಿದ್ದಾಳೆ ಎಂಬ ಕಾರಣಕ್ಕೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಕೆಲ ತಿಂಗಳ ಹಿಂದೆ ಕೌಟುಂಬಿಕ ವಿಚಾರಕ್ಕೆ ನಿರ್ಮಲಾ ಪತಿ ಜತೆ ಜಗಳ ಮಾಡಿಕೊಂಡು ವೈಯಾಲಿಕಾವಲ್‌ನಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದರು.

ಈ ಮಧ್ಯೆ ನಿರ್ಮಲಾ ಅಪಘಾತದಲ್ಲಿ ಗಾಯಗೊಂಡಿದ್ದರು. ಅವರನ್ನು ಮಾತನಾಡಿಸಲು ವೈಯಾಲಿಕಾವಲ್‌ನ ಆಕೆಯ ಮನೆಗೆ ಬಂದಿದ್ದ ವಿನೋದ್‌ ಕುಮಾರ್‌, ಶೌಚಾಲಯದಲ್ಲಿದ್ದ ಪಿನಾಯಿಲ್‌ ಸೇವಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಕೆಳಗೆ ಬಿದ್ದು ಒದ್ದಾಡುತ್ತಿದ್ದ ವಿನೋದ್‌ ಕುಮಾರ್‌ನನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂಬುದು ಗೊತ್ತಾಗಿದ್ದು, ಅಸಹಜ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

ವಿಷ ಕುಡಿಸಿ ಕೊಲೆ: ಪೋಷಕರ ದೂರು : ನಿರ್ಮಲಾ ವಿರುದ್ಧ ವಿನೋದ್‌ ಕುಮಾರ್‌ ಪೋಷಕರು ದೂರು ನೀಡಿದ್ದಾರೆ. ಆಕೆ ಬೇರೆ ವ್ಯಕ್ತಿ ಜತೆ ಆತ್ಮೀಯತೆ ಹೊಂದಿದ್ದಳು. ಅದನ್ನು ಪ್ರಶ್ನಿಸಿದ್ದಕ್ಕೆ ವಿನೋದ್‌ ಕುಮಾರ್‌ಗೆ ವಿಷ ಕುಡಿಸಿ ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಪ್ರಕರಣ ದಾಖಲಿಸಿದ್ದಾರೆ. ಎಲ್ಲಾ ಆಯಾಮ ಗಳಲ್ಲೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next