Advertisement

ಪರಪುರುಷರನ್ನು ನೋಡಬಾರದೆಂದು ಪತ್ನಿಯ ಕಣ್ಣನ್ನೇ ಕಿತ್ತ ಪಾಪಿ ಪತಿ 

04:35 PM Apr 26, 2017 | Team Udayavani |

ಬೆಂಗಳೂರು: ಪರಪುರುಷರನ್ನು ನೋಡಬಾರದೆಂದು ವ್ಯಕ್ತಿಯೊಬ್ಬ ಪತ್ನಿ ಯ ಕಣ್ಣನ್ನೇ ಕಿತ್ತು ಹಾಕಿ ದಾರ್ಷ್ಟ್ಯ ಮೆರೆದ ಘಟನೆ ನಾಗೇನಹಳ್ಳಿಯಲ್ಲಿ ಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. 

Advertisement

ಒಡಿಶಾ ಮೂಲದ ಮುನ್ನಾ ಎಂಬಾತ ಪತ್ನಿ ರಾಧಾಳಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ,ತಲೆಗೆ ದೊಣ್ಣೆಯಿಂದ ಬಲವಾಗಿ  ಹೊಡೆದ ಪರಿಣಾಮವಾಗಿ ಕಣ್ಣು ಹೊರಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

15 ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ದಂಪತಿ ಡೆವ್‌ಲಪರ್ಸ್‌ ಕಂಪೆನಿಯೊಂದರಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡಿದ್ದರು ಎಂದು ತಿಳಿದು ಬಂದಿದೆ. 

ಕೊತ್ತನೂರು ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದು , ಆರೋಪಿ ಮುನ್ನಾ ನಿಗಾಗಿ ಶೋಧ ಆರಂಭಿಸಿದ್ದಾರೆ. 

ರಾಧಾಳ ಸ್ಥಿತಿ ಚಿಂತಾಜನಕವಾಗಿದ್ದು ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next