Advertisement

ನಾಳೆ ಕಾಶ್ಮೀರ ಬಂದ್‌ಗೆ ಪ್ರತ್ಯೇಕತಾವಾದಿಗಳ ಕರೆ

02:15 AM Apr 01, 2017 | Team Udayavani |

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಚೆನಾನಿ-ನಶ್ರಿ ಸುರಂಗ ಮಾರ್ಗ ಉದ್ಘಾಟನೆಗೆ ಎ.2ರಂದು ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಬಂದ್‌ಗೆ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದಾರೆ. ಭದ್ರತಾ ಪಡೆಗಳು ಮುಗ್ಧ ನಾಗರಿಕರ ಹತ್ಯೆ ಮಾಡುತ್ತಿವೆ ಎಂದು ಸಂಘಟನೆಗಳು ಆರೋಪಿಸಿವೆ. 70 ವರ್ಷಗಳ ಕಾಶ್ಮೀರದ ನೈಜ ಬೇಡಿಕೆ ಈಡೇರಿಸದ ಹೊರತು ಸುರಂಗ, ರಸ್ತೆ ನಿರ್ಮಾಣ ಇತ್ಯಾದಿ ನಿರರ್ಥಕ ಎಂದು ಹೇಳಿವೆ.

Advertisement

ಶುದ್ಧ ಗಾಳಿಯ ಸುರಂಗ: ಏಷ್ಯಾದ ಅತಿ ಉದ್ದದ, 10.8 ಕಿ.ಮೀ.ನ ಚೆನಾನಿ – ನಶ್ರಿ ಸುರಂಗ ಮಾರ್ಗ ಭಾರತದಲ್ಲೇ ಮೊದಲ ಶುದ್ಧ ಗಾಳಿ ವ್ಯವಸ್ಥೆ ಹೊಂದಿದ ಸುರಂಗ. 5 ಸುರಂಗಗಳಲ್ಲಿ ಟ್ರಾನ್ಸರ್ವ್‌ ವೆಂಟಿಲೇಷನ್‌ ಸಿಸ್ಟಂ ಇದೆ. ಇದರಿಂದ ಅಶುದ್ಧ ಗಾಳಿ, ವಾಹನಗಳ ಹೊಗೆ ಹೊರ ಹೋಗಿ, ಶುದ್ಧಗಾಳಿ ಸುರಂಗದಲ್ಲಿ ಇರುವಂತೆ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next