Advertisement

ಹುಣಸೂರು: ಅಪರಿಚಿತ ವಾಹನ ಡಿಕ್ಕಿ ಪಾದಾಚಾರಿ ಸಾವು

11:35 PM Jul 23, 2023 | |

ಹುಣಸೂರು: ಅಪರಿಚಿತವಾಹನ ಡಿಕ್ಕಿ ಹೊಡೆದ ಪರಿಣಾಮ ತೀವ್ರಗಾಯಗೊಂಡಿದ್ದ ವೃದ್ದರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ನರಸಿಂಹಸ್ವಾಮಿ ತಿಟ್ಟಿನ ಬಳಿ ನಡೆದಿದೆ.

Advertisement

ಎಚ್.ಡಿ.ಕೋಟೆ ಪಟ್ಟಣದ ನಿವಾಸಿ ಪುಟ್ಟಸ್ವಾಮಿ(65) ಮೃತರು, ಇವರಿಗೆ ಪತ್ನಿ,ಮಕ್ಕಳಿದ್ದಾರೆ.

ವೃದ್ದ ಪುಟ್ಟಸ್ವಾಮಿಯವರು ಶನಿವಾರ ಸಂಜೆ ಎಚ್.ಡಿ.ಕೋಟೆಯಿಂದ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಹುಣಸೂರಿಗೆ ಬಂದು ನಗರದ ನರಸಿಂಹಸ್ವಾಮಿ ತಿಟ್ಟು ಬಡಾವಣೆಯಲ್ಲಿರುವ ತಮ್ಮ ತಮ್ಮನ ಮಗಳ ಮನೆ ನಡೆದು ಹೋಗುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಬಂದ ಅಪರಿಚಿತ ವಾಹನ ಡಿಕ್ಕಿಕೊಡೆದ ಪರಿಣಾಮ ತಲೆ, ಕೈ,ಕಾಲುಗಳಿಗೆ ತೀವ್ರಗಾಯಗೊಂಡಿದ್ದರು. ಅವರನ್ನು ದಾರಿ ಹೋಕರು ಸಾರ್ವಜನಿಕ ಆಸ್ಪತ್ರೆಗೆ ಕರೆತರುವಷ್ಟರಲ್ಲಾಗಲೇ ಸಾವನ್ನಪ್ಪಿದ್ದರು, ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೃದ್ದರ ಜೇಬಿನಲ್ಲಿದ್ದ ಪ್ರಯಾಣದ ಟಿಕೆಟ್ ಆಧರಿಸಿ ಕುಟುಂಬದವರನ್ನು ಪತ್ತೆ ಹಚ್ಚಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ವಾರಸು ದಾರರಿಗೆ ಹಸ್ತಾಂತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next