Advertisement

ಹುಣಸೂರು: ಮೂರನೇ ಬಾರಿಗೆ ಮಂಜುನಾಥ ಬಡಾವಣೆ ಜಲಾವೃತ

10:39 AM Oct 14, 2022 | Team Udayavani |

ಹುಣಸೂರು: ಗುರುವಾರ ರಾತ್ರಿಯಿಂದ ಸುರಿದ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆಗೆ ಸಾಕೇತ, ಮಂಜುನಾಥ ಹಾಗೂ ನ್ಯೂ ಮಾರುತಿ ಬಡಾವಣೆಯ ರಸ್ತೆಗಳಲ್ಲಿ ದಾರಾಕಾರವಾಗಿ ಮಳೆ ನೀರು ಹರಿಯುತ್ತಿದ್ದು, ಈ ಬಡಾವಣೆಗಳ 300ಕ್ಕೂ ಅಧಿಕ ಮನೆಗಳಿಂದ ನಿವಾಸಿಗಳು ಹೊರಬರದಂತಾಗಿದೆ. ಮಳೆ ಇನ್ನೂ ಹೆಚ್ಚಾದರೆ ಮನೆಗಳ ಒಳಗೂ ನೀರು ನುಗ್ಗುವ ಸಾದ್ಯತೆ ಇದೆ.

Advertisement

ಹಳ್ಳಗಳಲ್ಲಿ ನೀರು ನಿಂತಿರುವುದರಿಂದ ರಸ್ತೆ, ಚರಂಡಿ, ಹೊಂಡಗಳು ಕಾಣದಾಗಿದ್ದು, ನಿವಾಸಿಗಳು ಮನೆಯಿಂದ ಹೊರ ಬರಲು ಹೆದರುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಡಾವಣೆ ನಿವಾಸಿಗಳು ನೀಡಿದ ಮಾಹಿತಿ ಮೇರೆಗೆ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಬಡಾವಣೆಗೆ ಹೊಂದಿಕೊಂಡಿರುವ ವಳ್ಳಮ್ಮನ ಕಟ್ಟೆ ಸಹ ತುಂಬಿ ಹರಿಯುತ್ತಿದೆ. ನಿವಾಸಿಗಳು ಬೇರೆಡೆಗೂ ತೆರಳದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next