Advertisement

Hunsur: ಅಪಘಾತದಲ್ಲಿ ಹುಣಸೂರು KSRTC ಚಾಲಕ ಮೃತ್ಯು

08:47 PM Sep 06, 2023 | |

ಹುಣಸೂರು: ಬೈಕ್‌ನಿಂದ ಆಯತಪ್ಪಿ ಬಿದ್ದು ತೀವ್ರ ಗಾಯಗೊಂಡು ಕೆಎಸ್‌ಆರ್‌ಟಿಸಿಯ ಹುಣಸೂರು ಡಿಪೋ ಚಾಲಕ-ನಿರ್ವಾಹಕಕಾರಿದ್ದ ಎಚ್.ಆರ್.ಶಿವಲಿಂಗಕುಮಾರ್ ಮೃತಪಟ್ಟಿದ್ದಾರೆ.

Advertisement

ತಾಲೂಕಿನ ಹನಗೋಡು ಹೋಬಳಿಯ ಹೆಗ್ಗಂದೂರು ಗ್ರಾಮದ ರುದ್ರಚಾರಿಯವರ ಪುತ್ರ ಎಚ್.ಆರ್.ಶಿವಲಿಂಗಕುಮಾರ್(35)ಮೃತರು. ಪತ್ನಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಕರ್ತವ್ಯಕ್ಕಾಗಿ ಸ್ವಗ್ರಾಮದಿಂದ ಗ್ರಾಮದಿಂದ ತನ್ನ ಬೈಕ್‌ನಲ್ಲಿ ಹುಣಸೂರಿಗೆ ಬರುತ್ತಿದ್ದ ವೇಳೆ ಸ್ಕಿಡ್ ಆಗಿ ಕೆಳಗೆ ಬಿದ್ದು ತಲೆ, ಕೈ, ಕಾಲಿಗೆ ತೀವ್ರ ಗಾಯಗೊಂಡಿದ್ದ ಅವರನ್ನು ಹನಗೋಡಿನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಈ ಸಂಬಂಧ ಮೃತರ ಪತ್ನಿ ಸುಶ್ಮಿತತಾ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಡಿಪೋ ಮ್ಯಾನೇಜರ್ ಸುಬ್ರಮಣ್ಯ ಹಾಗೂ ಸಹೋದ್ಯೋಗಿಗಳು ಅಂತಿಮ ದರ್ಶನ ಪಡೆದು, ಕುಟುಂಬದವರಿಗೆ ಸಾಂತ್ವನ ಹೇಳಿದರು.
ತಾತ್ಕಾಲಿಕ ಪರಿಹಾರ: ಸಾರಿಗೆ ಸಂಸ್ಥೆವತಿಯಿಂದ ಡಿಪೊ ಮ್ಯಾನೇಜರ್ 15 ಸಾವಿರ ರೂಗಳ ತಾತ್ಕಾಲಿಕ ಪರಿಹಾರದ ಚೆಕ್ ವಿತರಿಸಿದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next