Advertisement

Hunsur: ಬಸ್ಸಿನಲ್ಲೇ ಹೃದಯಾಘಾತ- ಪ್ರಯಾಣಿಕ ಸಾವು

08:58 PM Jan 16, 2024 | Team Udayavani |

ಹುಣಸೂರು: ಪತ್ನಿ ಮನೆಗೆ ತೆರಳುತ್ತಿದ್ದ ಪ್ರಯಾಣಿಕನೊರ್ವ ಸಾರಿಗೆ ಸಂಸ್ಥೆ ಬಸ್ಸಿನಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.

Advertisement

ಕೆ.ಆರ್.ನಗರದ ಹಣ್ಣಿನ ವ್ಯಾಪಾರಿ ಮಹಮ್ಮದ್ ರಿಯಾಜ್(50) ಮೃತರು. ಇವರು ಮಂಗಳವಾರ ಕೆ.ಆರ್.ನಗರದಿಂದ ಹುಣಸೂರು ಡಿಪೋಗೆ ಸೇರಿದ ಬಸ್‌ನಲ್ಲಿ ಪಿರಿಯಾಪಟ್ಟಣದ ಪತ್ನಿ ಮನೆಗೆ ತೆರಳಲು ಹುಣಸೂರಿಗೆ ಬರುತ್ತಿದ್ದರು. ಪ್ರಯಾಣಿಕರೆಲ್ಲಾ ಇಳಿದರೂ ಸಹಇವರು ಇಳಿಯದ್ದನ್ನು ಕಂಡ ಕಂಡಕ್ಟರ್ ದಿನೇಶ್, ಚಾಲಕ ರಾಜೇಶ್ ಎಬ್ಬಿಸಲು ಹೋಗಿದ್ದಾರೆ. ಪ್ರತಿಕ್ರಿಯೆ ಸಿಗದಿದ್ದಾಗ, ಪೊಲೀಸರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ಕರೆತಂದಿದ್ದಾರೆ. ವೈದ್ಯರು ಪರೀಕ್ಷಿಸುವಷ್ಟರಲ್ಲಾಗಲೇ ಮೃತಪಟ್ಟಿದ್ದರು. ಎ.ಎಸ್.ಐ.ರಮೇಶ್ ಪ್ರಕರಣ ದಾಖಲಿಸಿ, ವಿಳಾಸ ಪತ್ತೆ ಹಚ್ಚಿ ಪಿರಿಯಾಪಟ್ಟಣ ತಾಲೂಕಿನ ಅಂಕನಹಳ್ಳಿಯಲ್ಲಿದ್ದ ಮೃತರ ಪತ್ನಿ ರೇಷ್ಮಾಬಾನುರಿಗೆ ಮಾಹಿತಿ ನೀಡಿದ ಮೇರೆಗೆ ಕುಟುಂಬದವರು ಆಗಮಿಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಶವವನ್ನು ಒಪ್ಪಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next