Advertisement

ಹುಣಸೂರು: ಸಾಲ ಬಾಧೆಯಿಂದ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ

09:54 PM Dec 30, 2022 | Team Udayavani |

ಹುಣಸೂರು : ಸಾಲದ ಬಾಧೆಯಿಂದ ಬಳಲುತ್ತಿದ್ದ ಯುವ ರೈತನೋರ್ವ ಕಾಳಿನ ಕ್ರಿಮಿನಾಶಕ ಮಾತ್ರೆಯನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ನೇರಳಕುಪ್ಪೆಯಲ್ಲಿ ನಡೆದಿದೆ.

Advertisement

ಗ್ರಾಮದ ಸ್ವಾಮೀಗೌಡರ ಪುತ್ರ ಮಹೇಶ(46) ಆತ್ಮಹತ್ಯೆ ಮಾಡಿಕೊಂಡ ರೈತ.ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಮೃತ ಮಹೇಶ ಹೆಸರಿನಲ್ಲಿ 3.07 ಗುಂಟೆ ಭೂಮಿ ಇದ್ದು, ಈತ 4 ವರ್ಷಗಳ ಹಿಂದೆ ಫೈನಾನ್ಸ್ ನಲ್ಲಿ 10 ಲಕ್ಷ ಟ್ರ್ಯಾಕ್ಟರ್ ಸಾಲ ಹಾಗೂ ಹೆಗ್ಗಂದೂರು ಸಹಕಾರ ಬ್ಯಾಂಕಿನಲ್ಲಿ1.30 ಲಕ್ಷರೂ ಹಾಗೂ ೫ಲಕ್ಷ ಕೈಸಾಲ ಮಾಡಿ ಶುಂಠಿ ಬೆಳೆಯನ್ನು ಬೆಳೆದಿದ್ದರು.

ಈ ಬಾರಿ ಭಾರೀ ಮಳೆಯಿಂದಾಗಿ ಶುಂಠಿ ಬೆಳೆ ನಷ್ಟ ಉಂಟಾಗಿ, ಸಾಲ ತೀರಿಸಲಾಗದೆ ಪರಿತಪಿಸುತ್ತಿದ್ದರು. ಇವರು ಮನನೊಂದು ಗುರುವಾರ ರಾತ್ರಿ 12 ರ ವೇಳೆ ತಮ್ಮ ಮನೆಯಲ್ಲಿ ಕಾಳಿನ ಕ್ರಿಮಿನಾಶಕ ಮಾತ್ರೆ ಸೇವಿಸಿ, ಅಸ್ವಸ್ಥಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಪಲಕಾರಿಯಾಗದೆ ಮೃತಪಟ್ಟಿದ್ದಾರೆಂದು ಪುತ್ರ ಅಶ್ವತ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಶುಕ್ರವಾರ ಅಂತ್ಯಕ್ರಿಯೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next