Advertisement

ಹುಣಸೂರು ಕೆಎಸ್‌ಬಿಸಿಎಲ್‌ನಲ್ಲಿ ಅವಧಿ ಮೀರಿದ  771.700 ಲೀ. ಮದ್ಯ ನಾಶ

01:01 PM Dec 23, 2021 | Team Udayavani |

ಹುಣಸೂರು: ಹುಣಸೂರು ನಗರದ ಕರ್ನಾಟಕ ಪಾನೀಯ ನಿಗಮ ನಿಯಮಿತ ಸಗಟು ಮದ್ಯ ಮಳಿಗೆಯಲ್ಲಿ ಅವಧಿ ಮೀರಿದ 771.700 ಲೀ. ಮದ್ಯವನ್ನು ನಿಯಮಾನುಸಾರ ನಾಶಪಡಿಸಲಾಯಿತು.

Advertisement

ಬುಧವಾರದಂದು ನಗರದ ಎಪಿಎಂಸಿ ಆವರಣದಲ್ಲಿನ ಕೆಎಸ್‌ಬಿಸಿಎಲ್ ಕಚೇರಿ ಆವರಣದಲ್ಲಿ ಮೈಸೂರು ಜಿಲ್ಲಾ ಗ್ರಾಮಾಂತರ ಅಬಕಾರಿ ಉಪ ಆಯುಕ್ತೆ ಡಾ.ಮಹದೇವಿಬಾಯಿ ನೇತೃತ್ವದಲ್ಲಿ ಹುಣಸೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಕೆ.ಶ್ರೀನಿವಾಸ್ ಸಮ್ಮುಖದಲ್ಲಿ ಅವಧಿ ಮೀರಿದ ಒಟ್ಟು  771.700 ಲೀಟರ್ ಬಿಯರ್, ವೈನ್ ಹಾಗೂ ಬ್ರೀಜರ್‌ನ್ನು ಸುರಿದು ನಾಶಪಡಿಸಲಾಯಿತು.

ಈ ವೇಳೆ ಕೆಎಸ್‌ಬಿಸಿಎಲ್ ವ್ಯವಸ್ಥಾಪಕ ಸಿ.ಸಿದ್ದರಾಜು, ಸಹಾಯಕ ವ್ಯವಸ್ಥಾಪಕ ಕೆ.ಎಲ್.ಸುರೇಶ್, ಅಬಕಾರಿ ನಿರೀಕ್ಷಕ ಎಂ.ಎನ್.ನಟರಾಜ್, ಸಿಬ್ಬಂದಿ ವೈ.ಎಸ್.ನವೀನ್‌ಕುಮಾರ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next