Advertisement

Hunsur; ಮನೆಗೆ ಕನ್ನ ಹಾಕಿದ ಕಳ್ಳರಿಂದ ಕೋಟ್ಯಂತರ ರೂ. ನಗ, ನಗದು ದರೋಡೆ

11:34 PM Jun 30, 2024 | Team Udayavani |

ಹುಣಸೂರು: ಮನೆ ಹಿಂಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು ಕೋಟ್ಯಂತರ ರೂ ನಗದು, ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಭಾನುವಾರ ಸಂಜೆ ನಗರದ ಮಂಜುನಾಥ ಬಡಾವಣೆಯಲ್ಲಿ ನಡೆದಿದೆ.

Advertisement

ಗೋಕುಲ ರಸ್ತೆಯ ಸಗಟು ರಸಗೊಬ್ಬರ ವ್ಯಾಪಾರಿ ಗಿರೀಶ್ ಎಂಬುವವರ ಮನೆಯಲ್ಲಿ ದರೋಡೆ ನಡೆದಿದ್ದು, ಭಾನುವಾರ ಸಂಜೆ ಕುಟುಂಬದವರು ಮನೆಯಲ್ಲಿರಲಿಲ್ಲ. ಈ ವೇಳೆ ತಾಯಿಯನ್ನು ಬಿಟ್ಟು ಬರಲು ಮನೆ ಬೀಗ ಹಾಕಿ ಹೊಗಿದ್ದ ವೇಳೆ ಹಿಂಬಾಗಿಲು ಮುರಿದು ಒಳ ಪ್ರವೇಶಿಸಿರುವ ಕಳ್ಳರು ಬೀರು ಬೀಗ ಒಡೆದು ತಿಚೋರಿಯಲ್ಲಿದ್ದು 1.80 ಕೋಟಿರೂ ನಗದು ಹಾಗೂ 22 ಲಕ್ಷರೂ ಬೆಲೆ ಬಾಳುವ ಚಿನ್ನಾಭರಣ ದರೋಡೆ ಮಾಡಿ ಹಿಂಬಾಗಿಲಿನಿಂದಲೇ ಪರಾರಿಯಾಗಿದ್ದಾರೆ.

ತಾಯಿಯನ್ನು ಬಿಟ್ಟು ರಾತ್ರಿ ಮನೆಗೆ ಬಂದ ಗಿರೀಶ್  ಬೀಗ ತೆಗೆದು ಒಳ ಪ್ರವೇಶಿಸಿದ ವೇಳೆ ಹಿಂದಿನ ಬಾಗಿಲು ತೆಗೆದಿರುವುದನ್ನ ಕಂಡು ಒಳಗೆ ಹೋಗಿ ನೋಡಿದ ವೇಳೆ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ರಾತ್ರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸ್ಥಳಕ್ಕೆ‌ ಎಸ್ ಪಿ ಸೀಮಾ ಲಾಟ್ಕರ್. ಅಡಿಷನಲ್ ಎಸ್.ಪಿ. ಡಾ.ನಂದಿನಿ. ಡಿವೈಎಸ್ ಪಿ ಗೋಪಾಲಕೃಷ್ಣ. ಇನ್ಸ್ ಪೆಕ್ಟರ್ ಸಂತೋಷ್ ಕಶ್ಯಪ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next