Advertisement

Hunsur: ಕಾರು ಢಿಕ್ಕಿ ಹೊಡೆದು ಬೈಕ್ ಸವಾರ ಸಾವು

08:37 PM Oct 18, 2023 | Team Udayavani |

ಹುಣಸೂರು: ಕಾರು ಬೈಕ್ ಮುಖಾಮುಖಿ ಢಿಕ್ಕಿಯಾಗಿ ತೀವ್ರಗಾಯಗೊಂಡಿದ್ದ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಗರದ ಆರ್.ಟಿ.ಓ ಕಚೇರಿ ಬಳಿಯ ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-275 ರ ಬೈಪಾಸ್‌ನಲ್ಲಿ ನಡೆದಿದೆ.

Advertisement

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರ ನಿವಾಸಿ ಹಾಸಿಗೆ ದುರಸ್ತಿ ಮಾಡುವ ಅಬ್ದುಲ್ ಜಬ್ಬಾರ್(56) ಮೃತ ದುರ್ದೈವಿ.

ಅಬ್ದುಲ್ ಜಬ್ಬಾರ್ ತನ್ನ ಬೈಕಿನಲ್ಲಿ ಮೈಸೂರಿನಿಂದ ಹಾಸಿಗೆ ದುರಸ್ತಿಗಾಗಿ ಬಟ್ಟೆ ಖರೀದಿಸಿ ಸ್ವಗ್ರಾಮದತ್ತ ತೆರಳುತ್ತಿದ್ದ ವೇಳೆ ಪಿರಿಯಾಪಟ್ಟಣ ಕಡೆಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಕಾರು ಢಿಕ್ಕಿ ಹೊಡೆದ ರಭಸಕ್ಕೆ ತೀವ್ರಗಾಯಗೊಂಡಿದ್ದರು. ದಾರಿ ಹೋಕರು ತತ್ ಕ್ಷಣವೇ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರಾದರೂ ಅದಾಗಲೇ ಸಾವನ್ನಪ್ಪಿದ್ದರು. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು-ಮಂಗಳೂರು ಹೆದ್ದಾರಿಯ ಆರ್.ಟಿ.ಓ.ಕಚೇರಿ ಎದುರಿನ ರಸ್ತೆ, ಅಯ್ಯಪ್ಪಸ್ವಾಮಿ ಬೆಟ್ಟದ ತಿರುವಿನಲ್ಲಿ ಪದೇಪದೇ ಅಪಘಾತಗಳು ಸಂಭವಿಸಿ ಪ್ರಾಣಹಾನಿಯಾಗುತ್ತಿದ್ದರೂ ಹೆದ್ದಾರಿ ನಿರ್ವಹಣೆ ಹೊತ್ತ ಇಂಜಿನಿಯರ್‌ಗಳು ರಸ್ತೆ ವಿಭಜಕ ಅಳವಡಿಸಲು ಮುಂದಾಗದೆ ಅಪಘಾತಗಳು ಸಂಭವಿಸುತ್ತಿದ್ದು, ಈ ಬಗ್ಗೆ ಕ್ರಮವಹಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next