Advertisement

ಹುಣಸೂರು: ಅಂಗನವಾಡಿ ಸಹಾಯಕಿಯ ಶವ ಅನುಮಾಸ್ಪದವಾಗಿ ಪತ್ತೆ

09:57 PM Oct 19, 2022 | Team Udayavani |

ಹುಣಸೂರು: ಅಂಗನವಾಡಿ ಸಹಾಯಕಿಯ ಶವ ತಾಲೂಕಿನ ಬನ್ನಿಕುಪ್ಪೆ ಗೇಟ್ ಬಳಿಯಲ್ಲಿ ಅನುಮಾಸ್ಪದವಾಗಿ ಪತ್ತೆಯಾಗಿದೆ.

Advertisement

ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯ ಅಂಗನವಾಡಿ ಸಹಾಯಕಿ ಮಲ್ಲಿಗೆ ಮಂಜುನಾಥ್(36) ಮೃತಪಟ್ಟಾಕೆ. ಇವರಿಗೆ ಪತಿ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಪಿರಿಯಾಪಟ್ಟಣ ತಾಲೂಕಿನ ಮಲ್ಲಿಗೆಯನ್ನು ಕಟ್ಟೆಮಳಲವಾಡಿಯ ಕಟ್ಟಡ ಕಾರ್ಮಿಕ ಮಂಜುನಾಥನಿಗೆ ಮದುವೆ ಮಾಡಿಕೊಡಲಾಗಿತ್ತು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಪತಿ ಕೂಲಿ ಮತ್ತು ಅಂಗನವಾಡಿ ಸಹಾಯಕಿಯ ಹುದ್ದೆದಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದರು.

ಬುಧವಾರ ಬೆಳಗ್ಗೆ ಮೈಸೂರು ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಬನ್ನಿಕುಪ್ಪೆ ಗೇಟ್ ಬಳಿಯ ರಸ್ತೆ ಬದಿಯಲ್ಲಿ ಕ್ರಿಮಿನಾಶಕ ಸೇವಿಸಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು. ಮಹಿಳೆ ಶವ ಪತ್ತೆಯಾಗಿರುವ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆಯಿಂದ ಸತ್ಯಾಂಶ ತಿಳಿಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next