Advertisement

E.D: ನೂರಾರು ಕೋಟಿ ರೂ. ಕಪ್ಪು ಹಣ ಪತ್ತೆ- ಇ.ಡಿ. ತನಿಖೆಗೆ ಬಿಎಸ್‌ವೈ ಪಟ್ಟು

11:33 PM Oct 16, 2023 | Team Udayavani |

ಬೆಂಗಳೂರು: ಐಟಿ ದಾಳಿ ಸಂದರ್ಭದಲ್ಲಿ ನೂರಾರು ಕೋಟಿ ರೂ. ಕಪ್ಪು ಹಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಆಗ್ರಹಿಸಿದ್ದಾರೆ.

Advertisement

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಎಲ್ಲರೂ ಇ.ಡಿ. ತನಿಖೆಗೆ ಆಗ್ರಹಿಸುತ್ತಿ ದ್ದಾರೆ. ನನ್ನ ಅಭಿಪ್ರಾಯವೂ ಅದೇ ಆಗಿದೆ ಎಂದರು.

ಐಟಿ ದಾಳಿಯಲ್ಲಿ ಸಿಕ್ಕ ಹಣ ಯಾರದು ಎಂಬುದು ತನಿಖೆಯಿಂದ ಪತ್ತೆಯಾಗಲಿದೆ. ಕಾಂಗ್ರೆಸ್‌ನವರು ಚುನಾವಣೆಗೆ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಖುದ್ದು ಪ್ರಹ್ಲಾದ್‌ ಜೋಷಿ ಆರೋಪ ಮಾಡಿದ್ದಾರೆ. ಈ ಸರಕಾರ ಹಣ ಸಂಗ್ರಹಿಸಲು ಆದ್ಯತೆ ನೀಡುತ್ತದೆಯೇ ಹೊರತು ಅಭಿವೃದ್ಧಿ ಕಡೆ ಗಮನ ಕೊಡುತ್ತಿಲ್ಲ ಎಂದು ಆರೋಪಿಸಿದರು.

ಶಿವಕುಮಾರ್‌ ಬ್ಯಾಂಕ್‌ ಆಫ್ ಇಂಡಿಯಾ: ವಿಜಯೇಂದ್ರ
ಕಾಂಗ್ರೆಸ್‌ನವರು ಕರ್ನಾ ಟಕದ ಲೂಟಿಗೆ ಶಿವಕುಮಾರ್‌ ಬ್ಯಾಂಕ್‌ ಆಫ್ ಇಂಡಿಯಾ ಎಂಬ ಮೇನ್‌ ಬ್ಯಾಂಕ್‌ ತೆರೆದಿ¨ªಾರೆ. ಹಣ ವಸೂಲಿ ಮಾಡಿ ಬೇರೆ ಬೇರೆ ರಾಜ್ಯಗಳಿಗೆ ಕಳಿಸುತ್ತಿರುವುದು ಸ್ಪಷ್ಟವಾಗಿದೆ. ದಸರಾದಲ್ಲಿ ಕಲಾವಿದರಿಂದಲೂ ಕಮಿಷನ್‌ ಕೇಳುವ ಮಟ್ಟಕ್ಕೆ ಸರಕಾರ ಇಳಿದಿದೆ. ಇದು ಎಟಿಎಂ ಸರಕಾರ ಎಂದು ಶಾಸಕ ಬಿ.ವೈ.ವಿಜಯೇಂದ್ರ ಆಪಾದಿಸಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಪಂಚ ರಾಜ್ಯ ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಕಾಂಗ್ರೆಸ್‌ ಚಟುವಟಿಕೆ ಚುರುಕಾಗಿದೆ. ಎಷ್ಟು ಸಾವಿರ ಕೋಟಿ ರೂ. ಅನ್ನು ಹೊರ ರಾಜ್ಯಕ್ಕೆ ಕಳುಹಿಸುತ್ತಿದ್ದಾರೆ ಎಂಬುದು ಯಾರ ಅಂದಾಜಿಗೂ ಸಿಗುತ್ತಿಲ್ಲ. ಒಳ್ಳೆ ಆಡಳಿತ ಕೊಡುತ್ತೇವೆ ಎಂದು ಹಗಲು ದರೋಡೆಯಲ್ಲಿ ಸರಕಾರ ಮುಳುಗಿದೆ ಎಂದು ಆರೋಪಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next