Advertisement

Hunasuru: ಕಾಡು ಹಂದಿ ದಾಳಿ; ತೀವ್ರ ಗಾಯಗೊಂಡ ರೈತ

08:58 PM Aug 19, 2024 | Team Udayavani |

ಹುಣಸೂರು: ಕಾಡು ಹಂದಿ ದಾಳಿ ನಡೆಸಿ ರೈತರೊಬ್ಬರನ್ನು ತೀವ್ರ ಗಾಯಗೊಳಿಸಿರುವ ಘಟನೆ ತಾಲೂಕಿನ ಧರ್ಮಾಪುರದಲ್ಲಿ ನಡೆದಿದೆ.

Advertisement

ಬಿಳಿಕೆರೆ ಹೋಬಳಿಯ ಧರ್ಮಾಪುರದ ಲೇ.ಸ್ವಾಮಿಗೌಡರ ಪುತ್ರ ಕರೀಗೌಡ ಗಾಯಗೊಂಡು ಹುಣಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೀಗೌಡರು ತಮ್ಮ ಜಮೀನಿನಲ್ಲಿ ದನಗಳ ಮೇಯಿಸುತ್ತಿದ್ದ ವೇಳೆ ಕಾಡು ಹಂದಿ ಏಕಾಏಕಿ ದಾಳಿ ನಡೆಸಿದಾಗ ಕಿರುಚಿಕೊಂಡಾಗ ಅಕ್ಕಪಕ್ಕದ ರೈತರು ಬರುವ ವೇಳೆಗಾಗಲೇ ಕೋರೆಯಿಂದ ಹೊಟ್ಟೆ, ಎದೆ, ಬೆನ್ನಿನ ಭಾಗಕ್ಕೆ ತಿವಿದು ಗಾಯಗೊಳಿಸಿದೆ. ಜನರು ಬರುವುದು ಕಂಡು ಕಾಡು ಹಂದಿ ಪರಾರಿಯಾಗಿದೆ.

ತೀವ್ರ ಗಾಯಗೊಂಡು ಅಸ್ವಸ್ಥಗೊಂಡಿದ್ದ ಕರೀಗೌಡರ ಗ್ರಾಮಸ್ಥರು ಹುಣಸೂರಿನ ಕಾವೇರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಘಟನಾ ಸ್ಥಳ ಪರಿಶೀಲಿಸಿದ್ದಾರೆ. ಚಿಕಿತ್ಸಾವೆಚ್ಚವನ್ನು ಇಲಾಖೆ ಭರಿಸುವುದಾಗಿ ಆರ್ ಎಫ್ ಒ ನಂದಕುಮಾರ್ ತಿಳಿಸಿದ್ದಾರೆ.

ಹಂದಿ ಹಾವಳಿ ತಪ್ಪಿಸಲು ರೈತರ ಆಗ್ರಹ:
ಹಂದಿ ಹಾವಳಿಯಿಂದ ಧರ್ಮಾಪುರ, ಗೌರಿಪುರ, ನಂಜಾಪುರ ಭಾಗದ ರೈತರು ಬೆಳೆದ ಬೆಳೆಗಳು ಹಾನಿಯಾಗಿ ಆತಂಕದಲ್ಲಿದ್ದು, ಸಿಕ್ಕಷ್ಟು ಬೆಲೆಗಳಿಗೆ ಬೆಳೆ ಮಾರಾಟ ಮಾಡುವಂತಾಗಿದೆ. ಹಂದಿ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸಲಾಗುವುದೆಂದು ನಂಜಾಪುರ ಮನು, ರಾಕೇಶ್, ಮಹದೇವ್ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next