Advertisement

ಹುಣಸೂರು: ಕೊಟ್ಟಿಗೆಗೆ ನುಗ್ಗಿದ ಹುಲಿಯೊಂದಿಗೆ ಸೆಣಸಿ ಪ್ರಾಣ ಉಳಿಸಿಕೊಂಡ ಹಸು

10:12 PM Dec 19, 2022 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನದಂಚಿನ ಕೆ.ಜಿ.ಹೆಬ್ಬನಕುಪ್ಪೆಯಲ್ಲಿ ಸೋಮವಾರ ಬೆಳಗಿನ ಜಾವ ಹುಲಿಯೊಂದು ಕೊಟ್ಟಿಗೆಗೆ ನುಗ್ಗಿ ಹಸುವಿನ ಮೇಲೆ ದಾಳಿ ನಡೆಸಿದೆ.

Advertisement

ನೇರಳಕುಪ್ಪೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉದಯ್ ಎಂಬುವರು ತಮ್ಮ ಕೆ.ಜಿ.ಹಬ್ಬನಕುಪ್ಪೆಯ ತೋಟದ ಕೊಟ್ಟಿಗೆಯಲ್ಲಿ ಹಸು ಕಟ್ಟಿ ಹಾಕಿದ್ದು, ಹಸುವಿನ ಮೇಲೆ ಹುಲಿಯ ದಾಳಿಯಿಂದ ಗಾಬರಿಗೊಂಡ ಹಸು ಎಗರಿದ್ದರಿಂದ ಕಟ್ಟಿದ್ದ ಹಗ್ಗ ತುಂಡಾಗಿದ್ದರಿಂದಾಗಿ ಹುಲಿ ಬಾಯಿಯಿಂದ ತಪ್ಪಿಸಿಕೊಂಡಿದೆ. ಹುಲಿ ಹಸುವಿನ ಮೇಲೆ ಮತ್ತೆ ದಾಳಿ ನಡೆಸಿದರೂ ಹಸು ಮಾತ್ರ ಹುಲಿಯೊಂದಿಗೆ ಸೆಣಸಾಟ ನಡೆಸಿ ಹುಲಿ ಬಾಯಿಂದ ಪಾರಾಗಿದ್ದು, ಮುಂಜಾನೆ ಹಾಲು ಕರೆಯಲು ಮನೆಯವರು ತೆರಳಿದ್ದ ವೇಳೆ ಹುಲಿ ಕಾಡಿನತ್ತ ಓಡಿಹೋಗಿದೆ.

ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಗಾಯಗೊಂಡಿರುವ ಹಸುವಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ಗ್ರಾಮಸ್ಥರ ಆಗ್ರಹ;
ಈ ಭಾಗದ ಜನರು ಭಯಬೀತರಾಗಿದ್ದು, ಬೋನಿಟ್ಟು ಹುಲಿ ಸೆರೆಹಿಡಿಯುವಂತೆ ಅರಣ್ಯ ಇಲಾಖೆಯನ್ನು ನೇರಳಕುಪ್ಪೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸ್ಯಾಮ್‍ ಸಂಗ್‍ ಗೆಲಾಕ್ಸಿ ಎಫ್‍ 13: ಹತ್ತು ಸಾವಿರ ಬಜೆಟ್ ನ ಆಯ್ಕೆಗಳಲ್ಲಿ ಸ್ಥಾನ ಪಡೆವ ಫೋನ್

Advertisement
Advertisement

Udayavani is now on Telegram. Click here to join our channel and stay updated with the latest news.

Next