Advertisement

ಹುಣಸೂರು: ಭಾರೀ ಮಳೆಗೆ ಬೆಳೆ ಹಾನಿ

11:12 AM Sep 25, 2018 | |

ಹುಣಸೂರು: ತಾಲೂಕಿನಾದ್ಯಂತ ಭಾನುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಸಾಕಷ್ಟು ಬೆಳೆ ಹಾನಿಯಾಗಿದೆ. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದೆ. ಬಿಸಿಲಿನಿಂದ ಬಳಲುತ್ತಿದ್ದ ಇಳೆ ತಂಪಾಗಿದೆ.

Advertisement

ಸೋಮವಾರ ಮುಂಜಾನೆ ಸುರಿದ ಎಡೆಬಿಡದ ಮಳೆಯಿಂದಾಗಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಲು ಪರದಾಡುವಂತಾಯಿತು. ಹನಗೋಡು ಹಾಗೂ  ಚಿಲ್ಕುಂದದಲ್ಲಿ 45, ಹುಣಸೂರು ನಗರ ಹಾಗೂ ಬಿಳಿಕೆರೆಯಲ್ಲಿ ತಲಾ 21 ಮಿಲಿ ಮೀಟರ್‌ ಮಳೆಯಾಗಿದೆ ಎಂದು ತಹಶೀಲ್ದಾರ್‌ ಮೋಹನ್‌ ತಿಳಿಸಿದ್ದಾರೆ.

ಕಬ್ಬು ನಾಶ: ಬಿಳಿಕೆರೆ ಹೋಬಳಿಯ ಅಸ್ವಾಳು ಗ್ರಾಮದ  ಜಯಮ್ಮ  ಅವರು ಎರಡು ಎಕರೆ ಹಾಗೂ ರಮೇಶ ಅವರಿಗೆ ಸೇರಿದ ಮೂರು ಎಕರೆ ಕಬ್ಬಿನ ಬೆಳೆ ಸಂಪೂರ್ಣ ನೆಲಕಚ್ಚಿದ್ದು, ಸುಮಾರು 4 ಲಕ್ಷ ರೂ. ನಷ್ಟ ಸಂಭವಿಸಿದೆ. ವಿವಿಧೆಡೆ ಬಾಳೆ ಬೆಳೆಗೂ ಹಾನಿಯಾಗಿದೆ. ಹೊಲಗಳಲ್ಲಿ ನೀರು ನಿಂತಿದ್ದು, ಕೆರೆ-ಕಟ್ಟೆಗಳಿಗೆ ನೀರು ಹರಿದು ಬಂದಿದೆ.

ಭಾನುವಾರ ರಾತ್ರಿಯಿಂದಲೇ ಶುರುವಾದ ಮಳೆ ಸೋಮವಾರ ಬೆಳಗ್ಗೆ 10 ವರೆಗೂ ಸುರಿಯಿತು. ಹನಗೋಡು ಭಾಗದಲ್ಲಿ ಸಹ ಭಾರೀ ಮಳೆಯಾಗಿದ್ದು, ಶುಂಠಿ ಬೆಳೆ ಸೇರಿದಂತೆ ಮುಸುಕಿನ ಜೋಳ ಬೆಳೆ ಕಟಾವಿಗೆ ತೊಡಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next