Advertisement

ಹುಣಸೂರು: ಕೊಡಗಿನಿಂದ ಅಕ್ರಮ ಮದ್ಯಸಾಗಾಟ; ಓರ್ವನ ಬಂಧನ, 155 ಲೀ ಮದ್ಯ, ಕಾರು ವಶ

09:50 AM May 29, 2021 | Team Udayavani |

ಹುಣಸೂರು: ಕೊಡಗಿನ ಕಡೆಯಿಂದ ಕಾರಿನಲ್ಲಿ ಅಕ್ರಮ ಮದ್ಯ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಅಬಕಾರಿ ಅಧಿಕಾರಿಗಳ ತಂಡವು 155 ಲೀ.ಮದ್ಯ ಸಹಿತ ಕಾರನ್ನು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಹುಣಸೂರು ಅಬಕಾರಿ ಡಿವೈಎಸ್‌ಪಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.

Advertisement

ಪಿರಿಯಾಪಟ್ಟಣ ತಾಲೂಕಿನ ಆನೆವಾಳು ಗ್ರಾಮದ ಲಕ್ಷ್ಮಣೇಗೌಡರ ಪುತ್ರ ಎ.ಎಲ್.ರಾಜೇಶ್‌ ಬಂಧಿತ ಆರೋಪಿ. ಕಾರಿನಲ್ಲಿದ್ದ 155.520ಲೀ ಒರಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯನ್ನು ವಶಕ್ಕೆ ಪಡೆಯಲಾಗಿದೆ.

ಕೋವಿಡ್-19 ಸಮಯದಲ್ಲಿ ಈತ ಹುಂಡೈ ಕಾರಿನಲ್ಲಿ ಅಕ್ರಮ ಮದ್ಯ ಸಾಗಾಣೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ. ಪಿರಿಯಾಪಟ್ಟಣ ತಾಲೂಕಿನ ಹಾರೋಹಳ್ಳಿ ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪ ಡಿವೈಎಸ್‌ಪಿ ಕೆ.ಶ್ರೀನಿವಾಸ್ ನೇತೃತ್ವದ ತಂಡವು ಕಾರನ್ನು ಅಡ್ಡಗಟ್ಟಿ ಪರಿಶೀಲಿಸಿದಾಗ ಅಕ್ರಮ ಮದ್ಯ ಸಾಗಣೆ ಕಂಡುಬಂದಿದ್ದು. ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕಿ ಸುಧಾರಾಣಿ, ಪೇದೆಗಳಾದ ರಾಘವೇಂದ್ರ, ಮೋಹನ್, ಚಾಲಕ ರಾಮಚಂದ್ರ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next