Advertisement

ಹುಣಸೂರು: ಬಾಳೆ ತೋಟದಲ್ಲಿ ಬೆಳೆದಿದ್ದ ಗಾಂಜಾ ಗಿಡ ಪೊಲೀಸರ ವಶ: ಆರೋಪಿ ಪರಾರಿ

09:42 AM Jun 27, 2021 | Team Udayavani |

ಹುಣಸೂರು: ಬಾಳೆ ತೋಟದಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಭಾರತವಾಡಿಯಲ್ಲಿ ನಡೆದಿದೆ.

Advertisement

ನಾಗರಹೊಳೆ ಉದ್ಯಾನವನದಂಚಿನ ಭಾರತವಾಡಿ ಗ್ರಾಮದ ಕೃಷ್ಣೇಗೌಡರ ಪುತ್ರ ರಮೇಶ್ ತನ್ನ ಬಾಳೆ ತೋಟದಲ್ಲಿ 29 ಗಾಂಜಾ ಗಿಡಗಳನ್ನು ಬೆಳೆಸಿದ್ದ.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಚೇತನ್ ರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಎ.ಎಸ್.ಪಿ. ಶಿವಕುಮಾರ್.ಡಿವೈಎಸ್ ಪಿ ರವಿಪ್ರಸಾದ್ ಮಾರ್ಗದರ್ಶನಲ್ಲಿ ಇನ್ಸ್ ಪೆಕ್ಟರ್ ಚಿಕ್ಕಸ್ವಾಮಿ ನೇತೃತ್ದಲ್ಲಿ  ಪೊಲೀಸರು  ತೋಟದ ಮೇಲೆ  ದಾಳಿ ನಡೆಸಿದ ವೇಳೆ ಕಟಾವಿಗೆ ಬಂದಿದ್ದ 29 ಗಾಂಜಾ ಗಿಡ ಪತ್ತೆಯಾಗಿದ್ದು. ಎಲ್ಲವನ್ನೂ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದ್ದು. ಆರೋಪಿ ರಮೇಶ್ ಪರಾರಿಯಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next