Advertisement

ಹುಣಸೂರು: ಬಟ್ಟೆ ಒಗೆಯುವ ವೇಳೆ ಕಾಲು ಜಾರಿ ಕಾಲುವೆಗೆ ಬಿದ್ದು ಮಹಿಳೆ ಸಾವು

02:23 PM Aug 07, 2021 | Team Udayavani |

ಹುಣಸೂರು: ಕಾಲುವೆಯಲ್ಲಿ ಬಟ್ಟೆ ಶುಚಿಗೊಳಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಜಾರಿ ಬಿದ್ದ ಮಹಿಳೆಯೊಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಹನಗೋಡು ಮುಖ್ಯ ನಾಲೆಯ ತಾಲೂಕಿನ ಹರಳಹಳ್ಳಿಯಲ್ಲಿ ನಡೆದಿದೆ.

Advertisement

ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಹರಳಹಳ್ಳಿಯ ಶಿವಲಿಂಗೇಗೌಡರ ಮೊದಲ ಪತ್ನಿ ನೀಲಾವತಿ(40) ಮೃತರು. ಗುರುವಾರದಂದು ಗ್ರಾಮದ ಬಳಿಯ ಲಕ್ಷ್ಮಣತೀರ್ಥ ನದಿಯ ಹನಗೋಡು ಮುಖ್ಯ ನಾಲೆಯ ಸೋಪಾನ ಕಟ್ಟೆಯಲ್ಲಿ ಬಟ್ಟೆ ಶುಚಿಗೊಳಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಜಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಶುಕ್ರವಾರ ಬೆಳಿಗ್ಗೆ ಹೊಸೂರು ಕೊಡಗು ಕಾಲೋನಿಯ ಕಾಳೇನಹಳ್ಳಿಯ ಕಾಲುವೆಯ ಕಿರು ಸೇತುವೆಗೆ ಶವ ಸಿಲುಕಿಕೊಂಡಿದ್ದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹರಳಳ್ಳಿಯ ಗ್ರಾಮಸ್ಥರು ಸ್ಥಳಕ್ಕಾಗಮಿಸಿ ಶವದ ಗುರುತು ಪತ್ತೆ ಹಚ್ಚಿದ್ದಾರೆ. ಶವ ಪರೀಕ್ಷೆ ನಡೆಸಿದ ನಂತರ ಹರಳಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

ಇದನ್ನೂ ಓದಿ :ಅಲೆಮಾರಿಗಳಿಗೆ ಸೂರು ಕಲ್ಪಿಸಲು ಒತ್ತಾಯಿಸಿ ಹುಣಸೂರು ತಾಲೂಕು ಪಂಚಾಯ್ತಿ ಎದುರು ಪ್ರತಿಭಟನೆ

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next