Advertisement

ಗ್ರಾಮೀಣ ಪತ್ರಕರ್ತರ ಸಾಧನೆ ಅಪಾರ

10:46 AM Jul 28, 2019 | Naveen |

ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಿಂದ ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕ್ರೀಮಿನಾಶಕ ಔಷಧ ಬಳಕೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕಿದೆ ಎಂದು ಕಲಬುರಗಿ ಸಂಯುಕ್ತ ಕರ್ನಾಟಕ ಸ್ಥಾನಿಕ ಸಂಪಾದಕ ಎಸ್‌.ಆರ್‌. ಮಣೂರ ಹೇಳಿದರು.

Advertisement

ಹುಣಸಗಿ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಹುಣಸಗಿ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರ ತುಂಬಾ ಮುಂದುವರಿದಿದ್ದು, ಅಷ್ಟೇ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕಿದೆ ಎಂದರು.

ನಂತರ ಮಾತನಾಡಿದ ಅಲ್ಮಾ ಮಿಡಿಯಾ ಸ್ಕೂಲ್ ಸಂಸ್ಥಾಪಕ ಹಾಗೂ ಚಿತ್ರ ನಿರ್ದೇಶಕ ಗೌರೀಶ ಅಕ್ಕಿ, ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದು ಹೇಳಿದ ಗಾಂಧೀಜಿ ಅವರಂತೆ ಹಳ್ಳಿಗಾಡಿನ ಪತ್ರಕರ್ತರ ಸಾಧನೆ ಅಪಾರ ಎಂದರು.

ಹುಣಸಗಿ ತಾಲೂಕು ಪತ್ರಕರ್ತರ ಸಂಘದ ಅದ್ಯಕ್ಷ ರಾಘವೇಂದ್ರ ಕಾಮನಟಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೇವಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ತಿಮ್ಮಮ್ಮ ಶಂಭನಗೌಡ್ರ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು.

ಕೃಷಿಕ ಸಮಾಜದ ಜಿಲ್ಲಾ ಉಪಾಧ್ಯಕ್ಷ ನಾಗಣ್ಣ ಸಾಹು ದಂಡಿನ್‌ ವಿಶೇಷ ವರದಿಗಳ ಗ್ಯಾಲರಿ ಅನಾವರಣಗೊಳಿಸಿದರು. ಡಾ| ವೀರಭದ್ರಗೌಡ, ಎಚ್.ಸಿ. ಪಾಟೀಲ ಮತ್ತು ಮಹಾದೇವಿ ಬೇವಿನಾಳಮಠ ಪತ್ರಿಕಾ ಒದುಗರ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯ ಪರಿಷತ್‌ ಮಾಜಿ ಸದಸ್ಯ ವೆಂಕಟಗಿರಿ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ನಾರಾಯಣ ಡಿ. ನಾಯಕ, ದೇವಣ್ಣ ಮಲಗಲದಿನ್ನಿ, ರಾಜು ಮಲಗಲದಿನ್ನಿ, ಹುಣಸಗಿ ತಹಶೀಲ್ದಾರ್‌ ಸುರೇಶ ಚವಲರ್‌, ಸಿಪಿಐ ಪಂಡಿತ್‌ ಸಗರ್‌ ವೇದಿಕೆ ಮೇಲಿದ್ದರು.

ಈ ಸಂದರ್ಭದಲ್ಲಿ ಸಮಾಜ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬೋರಮ್ಮ ಯಡಿಯೂರಮಠ, ಮಾಜಿ ಸೈನಿಕ ಹೇಮಂತ ರಾಠೊಡ, ಹಿರಿಯ ಪತ್ರಕರ್ತ ಎಸ್‌.ಆರ್‌. ಮಣೂರ, ಗೌರೀಶ ಅಕ್ಕಿ ಹಾಗೂ ಪತ್ರಿಕಾ ವಿತರಕರನ್ನು ಸ‌ನ್ಮಾನಿಸಲಾಯಿತು. ಭೀಮಶೇನರಾವ್‌ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಶಿವಶರಣ ಕಟ್ಟಿಮನಿ ಸ್ವಾಗತಿಸಿದರು. ಬಸವರಾಜ ಅಂಗಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next