Advertisement

ಕುಡಿಯಲು ಹಣ ಕೇಳಿದ ವಿಚಾರದಲ್ಲಿ ಜಗಳ, ಕೊಲೆಯಲ್ಲಿ ಅಂತ್ಯ: ಆರೋಪಿ ಬಂಧನ

07:57 PM Feb 19, 2023 | Team Udayavani |

ಹುಣಸಗಿ: ಕುಡಿಯಲು ಹಣ ಕೇಳಿದ ವಿಚಾರಕ್ಕೆ ಇಬ್ಬರ ನಡುವೆ ನಡೆದ ಹೊಡೆದಾಟದಲ್ಲಿ ಓರ್ವ ಕೊಲೆಯಾದ ಘಟನೆ ನಡೆದಿದೆ.

Advertisement

ಹುಣಸಗಿ ಸಮೀಪದ ಬಲಶೆಟ್ಟಿಹಾಳ ಗ್ರಾಮದಲ್ಲಿ ರಾಜೇಸಾಬ(38) ಕೊಲೆಯಾದ ವ್ಯಕ್ತಿ.

ಕೊಲೆಗೀಡಾದ ರಾಜೇಸಾಬ ರಾಜನ ಕೋಳೂರು ಗ್ರಾಮದವನಾಗಿದ್ದು, ಅದೇ ಗ್ರಾಮದ ವಿರೇಶ ಎಂಬಾತನು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.

ಅಷ್ಟು ಮಾತ್ರವಲ್ಲದೆ ಕೊಲೆಗೀಡಾದ ರಾಜೇಸಾಬನ ವಿರುದ್ಧ ಹುಣಸಗಿ, ಕೊಡೇಕಲ್-ನಾರಾಯಣಪುರ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು ಎಂದು ಹೇಳಲಾಗುತ್ತಿದೆ.

ಕುಡಿತಕ್ಕೆ ಹಣ ಕೇಳಿದ್ದಾಗ ಇಬ್ಬರ ನಡುವೆ ಕಲಹವಾಗಿ ಈ ಘಟನೆ ನಡೆಯಲು ಕಾರಣ ಎನ್ನಲಾಗಿದೆ. ರಾಜೇಸಾಬಗೆ ಗಂಭೀರ ಗಾಯವಾದ ಹಿನ್ನಲೆ ಕಲಬುರಗಿ ಆಸ್ಪತ್ರೆಗೆ ದಾಖಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಮೃತಪಟ್ಟಿದ್ದಾನೆ.

Advertisement

ಘಟನೆ ಕುರಿತು ರಾಜೇಸಾಬನ ಪತ್ನಿ ಹುಣಸಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು. ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: 4000 ಜನಸಂಖ್ಯೆ ಇರುವ ಈ ಪುಟ್ಟ ಹಳ್ಳಿಯಲ್ಲಿದ್ದಾರೆ 150 ಮಂದಿ ವೈದ್ಯರು

Advertisement

Udayavani is now on Telegram. Click here to join our channel and stay updated with the latest news.

Next