Advertisement

ಮಾನವತೆಯ ಮಹತ್ವ ಸಾರುವ ದೀವಳಿಗೆ..

07:12 PM Oct 25, 2019 | Suhan S |

ಮಾನವತೆಯ ಮಹತ್ವ ಸಾರುವ ದೀವಳಿಗೆ..

Advertisement

ಅಜ್ಞಾನದ ಕತ್ತಲೆ ಸರಿದು

ಸುಜ್ಞಾನದ ಬೆಳಕು ಹರಿದು

ಸ್ನೇಹ ಸಂಬಂಧದ ಸೇತುವೆ ಹುರಿಗೊಳುವ ಘಳಿಗೆಯಾಗಲೀ

ದೀವಳಿಗೆ..!

Advertisement

ಕಾಮ ಕ್ರೋಧದ ಕೊಳೆ ತೊಳೆದು

ನೀತಿ ನೇಮಗಳ ಬೆಳೆ ಬೆಳೆದು

ಶಾಂತಿ ನೆಮ್ಮದಿ ಫಸಲು ಕೊಯ್ಯುವ

ಘಳಿಗೆಯಾಗಲೀ ದೀವಳಿಗೆ..!

ಜಾತಿ ಮತಗಳ ಗೋಡೆ ಒಡೆದು

ಧರ್ಮಾಂಧತೆಯ ಪೀಡೆ ಸಿಗಿದು

ಭಾವೈಕ್ಯತೆಯ ಬತ್ತಿಯ ಹೊಸೆಯುವ

ಘಳಿಗೆಯಾಗಲೀ ದೀವಳಿಗೆ..!

ಎಡ ಬಲ ಪಂಥದ ಪರದೆ ಹರಿದು

ಸಮಬಲ ಚಿಂತನೆ ತೈಲ ಎರೆದು

ಮಾನವತೆಯ ಮಹತ್ವ ಸಾರುವ

ಘಳಿಗೆಯಾಗಲೀ ದೀವಳಿಗೆ..!

 

ನಾನು ನನ್ನದು ಸ್ವಾರ್ಥವ ಒಗೆದು

ಧ್ವೇಷಾಸೂಯೆ ಈರ್ಷೆ ತೊರೆದು

ಸರ್ವಜನಾಂಗದ ಶಾಂತಿಯ ಬಯಸುವ

ಘಳಿಗೆಯಾಗಲೀ ದೀವಳಿಗೆ..!

 

ದೇವರಾಜ್ ನಿಸರ್ಗತನಯ ,ಬಂಗಾರಪೇಟೆ

Advertisement

Udayavani is now on Telegram. Click here to join our channel and stay updated with the latest news.

Next