Advertisement

ಮಂಠಾಳ: ಕಸ ವಿಲೇವಾರಿ ವ್ಯವಸ್ಥೆಗೆ ಚಾಲನೆ

11:45 AM Sep 14, 2019 | Team Udayavani |

ಹುಮನಾಬಾದ: ಆರೋಗ್ಯವಂತ ಶರೀರಕ್ಕೆ ಪೌಷ್ಟಿಕ ಆಹಾರ ಸೇವನೆ ಅತ್ಯಂತ ಅವಶ್ಯವಾಗಿದೆ. ಗರ್ಭಿಣಿಯರು ತಪ್ಪದೇ ಇದನ್ನು ಪಾಲಿಸಿ ಹುಟ್ಟುವ ಮಗುವಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧಿಧೀಶೆ ಸರಸ್ವತಿ ದೇವಿ ಹೇಳಿದರು.

Advertisement

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಇಲಾಖೆಗಳು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಸಮತೋಲನ ಆಹಾರದಿಂದಾಗಿ ಶೇ.20 ಪುರುಷರು ಮತ್ತು ಶೇ.10 ಮಹಿಳೆಯರು ಅನಾರೋಗ್ಯದಿಂದ ನರಳುತ್ತಿದ್ದಾರೆ. ಮನೆಯಲ್ಲಿ ಮೊದಲಿನಂತೆ ಮನೆಯಲ್ಲಿ ಆಹಾರ ಸಿದ್ಧಪಡಿಸದೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿದ್ಧ ಆಹಾರ ಸೇವಿಸುತ್ತಿದ್ದಾರೆ. ಮಕ್ಕಳಿಗೆ ಮ್ಯಾಗಿ, ಕುರ್‌ಕುರೆ ಇನ್ನಿತರ ತಿನಿಸು ನೀಡುತ್ತಿರುವುದರ ಜೊತೆಗೆ ಮಾರುಕಟ್ಟೆಯಲ್ಲಿ ರಾಸಾಯನಿಕ ಸಿಂಪಡಿಸಿದ ಹಣ್ಣುಗಳೇ ಮಾರಾಟ ಆಗುತ್ತಿರುವ ಕಾರಣ, ನೈಸರ್ಗಿಕವಾಗಿ ಪಕ್ವಗೊಂಡ ಹಣ್ಣು ಲಭಿಸದಿರುವುದರಿಂದ ಲಭ್ಯವಿರುವ ಹಣ್ಣನ್ನೇ ಸೇವಿಸಿ ಮನುಷ್ಯನು ತನ್ನ ಆರೋಗ್ಯವನ್ನು ತಾನೇ ಹಾಳು ಮಾಡಿಕೊಳ್ಳುತ್ತಿದ್ದಾನೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೇ ಭವಿಷ್ಯದಲ್ಲಿ ಆಪತ್ತು ತಪ್ಪಿದ್ದಲ್ಲ ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಶಂಭುಲಿಂದ ದೇಸಾಯಿ ವಿಶೇಷ ಉಪನ್ಯಾಸ ನೀಡಿ, ಮೊದಲು ಬೇಗನೆ ಎದ್ದು ಧಾನ್ಯ ಬೀಸುವುದು ಮತ್ತು ಕುಟ್ಟಿ ನಸುಕಿನ ಜಾವದಲ್ಲೇ ರೊಟ್ಟಿ ಬಡಿಯುತ್ತಿದ್ದ ಹಿನ್ನೆಲೆಯಲ್ಲಿ ಕೆಲಸಕ್ಕಾಗಿ ತೆರಳುವ ಪುರಷರಿಗೆ ಸೋರ್ಯೋದಯಕ್ಕೂ ಮುಂಚೆ ಬಿಸಿ ರೊಟ್ಟಿ, ಸೇಂಗಾ ಮತ್ತಿತರ ಚಟ್ನಿ, ಕೆನೆ ಮೊಸರು ಮೊದಲಾದ ಪೌಷ್ಟಿಕ ಆಹಾರ ಸಿಗುತ್ತಿತ್ತು. ಈಗ ಮನೆಯಲ್ಲಿರುವ ಸತಿ-ಪತಿಗಳಿಬ್ಬರೂ ಕೆಲಸಕ್ಕೆ ಹೋಗುವ ಕಾರಣ ಆಹಾರ ತಯಾರಿಕೆಗೆ ಯಾರಿಗೂ ಸಮಯ ಸಿಗುತ್ತಿಲ್ಲ. ಜೊತೆಗೆ ಮಕ್ಕಳನ್ನು ಬೆಳಗ್ಗೆಯೇ ಶಾಲೆಗೆ ಕಳಿಸಬೇಕಾಗಿರುವ ಕಾರಣ ಜೀವನವೇ ಯಾಂತ್ರಿಕವಾಗಿ ಮಾರ್ಪಟ್ಟಿದೆ. ಇದರಿಂದ ಮನುಷ್ಯ ಸಿದ್ಧ ಆಹಾರದ ಮೊರೆ ಹೋಗುತ್ತಿದ್ದಾನೆ. ಇದು ಬದಲಾಗದ ಹೊರತು ಆರೋಗ್ಯ ಸುಧಾರಣೆಯಾಗದು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಮಾತನಾಡಿ, ನಾವೆಲ್ಲ ಚಿಕ್ಕವರಿರುವಾಗ ತಾಯಿ ಮುಷ್ಠಿ ತುತ್ತಿನ ಜೊತೆಗೆ ತಮ್ಮ ವಾತ್ಸಲ್ಯ ಮಿಶ್ರಣ ಮಾಡಿ ಕೊಡುತ್ತಿದ್ದ ಆಹಾರ ದೇಹ, ಮನಸ್ಸುಗಳೆರನ್ನೂ ಸಂತುಷ್ಟಗೊಳಿಸುತ್ತಿತ್ತು. ಈಗ ತಂದೆ ತಾಯಿ ಇಬ್ಬರು ನೌಕರಿಗೆ ಹೂಗುತ್ತಿರುವ ಕಾರಣ ಇಂದಿನ ಬದುಕು ಸಂಪೂರ್ಣ ಯಾತ್ರಿಕವಾಗಿ ಮಕ್ಕಳು ಪಾಲಕರ ಪ್ರೀತಿ, ವಾತ್ಸಲ್ಯದಿಂದ ವಂಚಿತರಾಗುತ್ತಿದ್ದಾರೆ. ಕಾರಣ ಮಕ್ಕಳು ದೈಹಿಕ ಸದೃಢತೆ ಕೊರತೆಯ ಜೊತೆಗೆ ಮಾನಸಿಕವಾಗಿಯೂ ಬಳಲುತ್ತಿವೆ. ಪಾಲಕರು ಹಣಕ್ಕಿಂತ ಮಕ್ಕಳ ಆರೋಗ್ಯ ಮತ್ತು ಉತ್ತಮ ಭವಿಷ್ಯ ನಿರ್ಮಿಸುವತ್ತ ಚಿತ್ತ ಹರಿಸಬೇಕಿದೆ ಎಂದರು.

Advertisement

ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ ಮಾತನಾಡಿ, ದೇಹಕ್ಕೆ ಒಂದೂ ಶ್ರಮ ಕೊಡದೇ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಮೊರೆ ಹೋಗುತ್ತಿರುವ ಕಾರಣ ಸರಳ ಹೆರಿಗೆ ಅಪರೂಪವಾಗಿದೆ. ಜೊತೆಗೆ ಕೆಲವು ವೈದ್ಯರು ಸರಳ ಹೆರಿಗೆ ಆಗುವ ಪ್ರಕರಣವನ್ನೂ ಹಣದ ಆಸೆಗಾಗಿ ಸಿಜೇರಿಯನ್‌ ಹೆರಿಗೆ ಮಾಡುವುದನ್ನು ಇದೀಗ ವ್ಯವಹಾರ ಮಾಡಿಕೊಂಡಿದ್ದಾರೆ. ಕಾರಣ ಮಹಿಳೆಯರು ಜೀವನಪೂರ್ತಿ ಆನಾರೋಗ್ಯದಿಂದ ಬಳಲಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ|ಅಶೋಕ ಮೈಲಾರಿ ಮಾತನಾಡಿ, ಊಟ ಸ್ವಾದಭರಿತವಾಗಿದೆ ಎಂದು ಬೇಕಾಬಿಟ್ಟಿ ತಿನ್ನುವುದು, ಕೆಲಸದ ಒತ್ತಡದ ಕಾರಣ ಅಲ್ಪೋಪಹಾರ ಸೇವಿಸಿ ಇಡೀ ದಿನ ಬರಿ ಹೊಟ್ಟೆಯಲ್ಲಿದ್ದರೆ ಅನಾರೋಗ್ಯ ಉಂಟಾಗುತ್ತದೆ. ಅತ್ತ ಅಲ್ಪ, ಇತ್ತ ಅತಿ ಈ ಎರಡರಲ್ಲಿ ಯಾವುದಕ್ಕೂ ಹಚ್ಚಿಕೊಳ್ಳದೇ ಹಿತ ಮತ್ತು ಮಿತ ಆಹಾರ ಸೇವಿಸುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಡಾ|ಗೋವಿಂದ ಮಾತನಾಡಿ, ಸ್ವಯಂ ಜಾಗೃತಿಯಾಗದ ಹೊರತು ಬದಲಾವಣೆ ಅಸಾಧ್ಯ. ಪೌಷ್ಠಿಕ ಆಹಾರ ಸಪ್ತಾಹ ಆಚರಣೆಗೆ ಸೀಮಿತಗೊಳ್ಳದೇ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಆರೋಗ್ಯ ಕಾಪಾಡಕೊಳ್ಳಲು ಸಾಧ್ಯ. ತಾಯಿ ಎದೆಹಾಲು ಮಗುವಿಗೆ ಅಮೃತಕ್ಕೆ ಸಮಾನ. ಆದರೆ ಇತ್ತೀಚಿನ ತಾಯಂದಿರು ಮಕ್ಕಳಿಗೆ ಎದೆ ಹಾಲು ಉಣಿಸುವುದರಿಂದ ಸೌಂದರ್ಯ ಕೆಡುತ್ತದೆಂಬ ನೆಪವೊಡ್ಡಿ ಬಾಟಲಿ ಹಾಲು ಕುಡಿಸಿ, ಪರೋಕ್ಷವಾಗಿ ಮಕ್ಕಳ ಅಪೌಷ್ಠಿಕತೆಗೆ ತಾಯಂದಿರೇ ಕಾರಣರಾಗುತ್ತಿದ್ದಾರೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಬಸಲಿಂಗಪ್ಪ ದೊಡ್ಮನಿ, ಪ್ರಧಾನ ಕಾರ್ಯದರ್ಶಿ ಸಿ.ಎಸ್‌.ಚನ್ನಪ್ಪ, ವಕೀಲ ವಿಜಯಕುಮಾರ ನಾತೆ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು. ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ಔಷ ಕಿಟ್ ವಿತರಿಸಲಾಯಿತು. ಇದೇ ವೇಳೆ ಪೌಷ್ಠಿಕ ಆಹಾರ ಪದಾರ್ಥಗಳ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. ಆಶಾದೇವಿ ಬಡದಾಳೆ ಪ್ರಾರ್ಥಿಸಿದರು. ಹಿರಿಯ ಆರೋಗ್ಯ ಸಹಾಯಕ ಶಿವಕುಮಾರ ಕಿವಡೆ ಸ್ವಾಗತಿಸಿದರು. ಹಿರಿಯ ಆರೋಗ್ಯ ಸಹಾಯಕ ತೀರ್ಥಪ್ಪ ಭೀಮಶೆಟ್ಟಿ ನಿರೂಪಿಸಿದರು. ಪಾರ್ವತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next