ಹುಮನಾಬಾದ: ಪಟ್ಟಣದ ಯುವ ಬ್ರಿಗೇಡ್ನ ಯುವಕರು ಜಿಲ್ಲಾದ್ಯಂತ ಸ್ವಯಂ ಪ್ರೇರಣೆಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಸ್ವತ್ಛ ಭಾರತ ಅಭಿಯಾನವನ್ನು ಬಲಪಡಿಸಿದ್ದಾರೆ. ಈ ಮೂಲಕ ವ್ಯರ್ಥ ಕಾಲಹರಣ ಮಾಡುವ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ.
Advertisement
ಪಟ್ಟಣದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಮಾರ್ಗದರ್ಶನದಲ್ಲಿ 2017ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಂಸ್ಥೆ ಸ್ವಯಂ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿದ್ದು, ಅನೈರ್ಮಲ್ಯವನ್ನು ಬೇರು ಸಮೇತ ಕಿತ್ತೆಸೆಯುವ ಕಾರ್ಯಕ್ಕೆ ಕೈ ಹಾಕಿದೆ. ವೇದಿಕೆಗಳ ಮೇಲೆ ಮೈಕ್ ಹಿಡಿದು ಭಾಷಣ ಮಾಡುವುದರಿಂದ ಈ ಸಮಸ್ಯೆ ನಿರ್ಮೂಲನೆ ಆಗುವುದಿಲ್ಲ. ವೈಯಕ್ತಿಕ ಪ್ರತಿಷ್ಠೆ ಬದಿಗೊತ್ತಿ ರಾಷ್ಟ ಪ್ರಗತಿಯನ್ನು ಪ್ರತಿಷ್ಠೆಯಾಗಿಸಿಕೊಂಡಾಗಲೇ ದೇಶದ ನಿಜವಾದ ಅಭಿವೃದ್ಧಿ ಸಾಧ್ಯ ಎಂಬುದನ್ನು ಅರಿತ 50 ಸದಸ್ಯರನ್ನು ಒಳಗೊಂಡ ತಂಡ ನಿರಂತರ ಕಾರ್ಯದಲ್ಲಿ ತೊಡಗಿದೆ.
Related Articles
Advertisement
ಕರೆದಾಗ ರಾಜ್ಯದ ಯಾವುದೇ ಮೂಲೆಗೆ ಬಂದು ನನ್ನೊಂದಿಗೆ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈ ಹುಮನಾಬಾದ (ಜಯಸಿಂಹನಗರ) ಯುವಕರ ಕಾರ್ಯ ಪ್ರಶಂಸನೀಯ ಎಂದು ನಗರದಕ್ಕೆ ಆಗಮಿಸಿದ ಸಂದರ್ಭದಲ್ಲಿ ಈ ತಂಡವನ್ನು ಶ್ಲಾಘಿಸಿದ್ದರು.ಈ ಕಾರ್ಯದಲ್ಲಿ ಪ್ರಮುಖ ಪದಾ ಧಿಕಾರಿಗಳಾದ ತಾಲೂಕು ಸಂಚಾಲಕ ಪ್ರಶಾಂತ ಶೇರಿಕಾರ, ಸಹ ಸಂಚಾಲಕ ಅಮೀತ ವರ್ಮಾ, ಕಾಶಿನಾಥ ರಾಂಪೂರೆ, ವಿಕ್ರಂ ಶಂಭುಶಂಕರ, ರಂಜಿತ್ ಮೇತ್ರೆ, ಕರಬಸಪ್ಪ ಛತ್ರಿ, ದಿಲೀಪ ಪಂಚಾಳ, ಅನೀಲರೆಡ್ಡಿ, ಬಲರಾಮ ಪೋಲ್ದಾಸ್, ಸಂತೋಷ ಜಮಾದಾರ, ಗೋಪಿ ಗುಪ್ತಾ, ಬಸವರಾಜ ಅಷ್ಟಗಿ, ನಿಲೇಶ ಪುಟಾಣಗಾರ, ಪ್ರಕಾಶ ಬಾವಗಿ, ಪ್ರಸಾದ ಸ್ವಾಮಿ, ಸುದರ್ಶ ಕಾಳಗಿ, ಬಾಲರೆಡ್ಡಿ ಯಾಚಾ, ಮಾಣಿಕ ರಾಜನಾಳೆ, ಅಶೊತೋಷ ಜಾಜಿ ಸೇರಿದಂತೆ 50ಕ್ಕೂ ಅಧಿಕ ಯುವಕರ ತಂಡ ಈ ಕಾರ್ಯದಲ್ಲಿ ತೊಡಗಿದೆ.