Advertisement

ಹ್ಯೂಮನ್‌ ರೈಟ್ಸ್‌ : ಕಾರ್ಯಾಗಾರ

03:01 PM Feb 22, 2017 | |

ಬಂಟ್ವಾಳ: ಮೂಲಭೂತ ಹಕ್ಕುಗಳು ಮತ್ತು ಮಾನವ ಹಕ್ಕು ಗಳಲ್ಲಿ ಮಾನವ ಹಕ್ಕುಗಳ ವ್ಯಾಪ್ತಿ ವಿಶಾಲವಾದುದು. ಬದುಕುವ ಹಕ್ಕು ಇರುವ ಪ್ರತಿಯೊಬ್ಬನೂ ಮಾನವ ಹಕ್ಕುಗಳ ಕುರಿತು ಅರಿವನ್ನು ಪಡೆದುಕೊಳ್ಳಬೇಕು ಎಂದು ಮಂಗಳೂರಿನ ಎಸ್‌.ಡಿ.ಎಂ. ಪಿ.ಜಿ.ಸೆಂಟರ್‌ ಫಾರ್‌ ಮ್ಯಾನೆಜ್‌ಮೆಂಟ್‌ ಸ್ಟಡೀಸ್‌ ಆಂಡ್‌ ರಿಸರ್ಚ್‌ ಇದರ ಅಸಿಸ್ಟೆಂಟ್‌ ಪ್ರೊಫೆಸ‌ರ್‌ ದೀಪಾ ನಾಯಕ್‌ ಪಿ.  ಹೇಳಿದರು.

Advertisement

ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನಲ್ಲಿ IQAC and Human Rights Association  ಇದರ ಜಂಟಿ ಆಶ್ರಯದಲ್ಲಿ ನಡೆದ ಯು.ಜಿ.ಸಿ ಪ್ರಾಯೋಜಿತ ವಿ.ವಿ. ಮಟ್ಟದ Human Rights s  ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಪಾಂಡುರಂಗ‌ ನಾಯಕ್‌ ಮಾತನಾಡಿ
ಪ್ರತಿಯೊಬ್ಬ ವಿದ್ಯಾರ್ಥಿಯು ಮಾನವ ಹಕ್ಕುಗಳ ಕುರಿತು ತಿಳಿವಳಿಕೆ ಪಡೆಯುವುದು ಅಗತ್ಯ. ಈ ನೆಲೆಯಲ್ಲಿ ಇಂತಹ ಕಾರ್ಯಕ್ರಮ ಸಹಕಾರಿ ಎಂದರು.

ಕಾರ್ಯಾಗಾರದ ಸಂಯೋಜಕರು ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ| ಪ್ರೇಮಲತಾ ಪೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯಾಗಾರದ ಇನ್ನೋರ್ವ ಸಂಯೋಜಕ  ಬಿ ನಾರಾಯಣ ಭಂಡಾರಿ ವಂದಿಸಿದರು. ಉಪನ್ಯಾಸಕಿ ಲಕ್ಷ್ಮೀ ಭಟ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next