Advertisement
ಒಟ್ಟಾರೆಯಾಗಿ ಸಭೆಯಲ್ಲಿ 51 ದೂರುಗಳನ್ನು ಪರಿಗಣಿಸಲಾಯಿತು. ಇತರ ದೂರುಗಳಲ್ಲಿ ಸಂಬಂಧಪಟ್ಟವರಿಂದ ವರದಿ ಪಡೆದುಕೊಂಡು ಬಳಿಕ ಕ್ರಮ ಕೈಗೊಳ್ಳುವುದಾಗಿ ಆಯೋಗವು ತಿಳಿಸಿದೆ. ಅಲ್ಲದೆ ದೂರುಗಳ ಕುರಿತು ಸಮಗ್ರ ಸಮಾಲೋಚನೆ ನಡೆಸಲಾಯಿತು.
ದೂರುದಾರರಿಂದ ಸ್ಪಷ್ಟವಾದ ಮಾಹಿತಿಗಳನ್ನು ಪಡೆದು, ತನಿಖೆ ನಡೆಸಿ ಅರ್ಥೈಸಿಕೊಳ್ಳದೆ ವರದಿ ಸಲ್ಲಿಸಬಾರದು ಎಂಬುದಾಗಿ ಮಾನವ ಹಕ್ಕು ಆಯೋಗವು ಪೊಲೀಸರಿಗೆ ನಿರ್ದೇಶನ ನೀಡಿದೆ. ದೂರುಗಳ ಬಗ್ಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವುದಾದರೆ ಸಭೆಗೆ ಬರುವ ಸಂದರ್ಭದಲ್ಲಿ ಇಂತಹ ನ್ಯಾಯಾಲಯದ ತೀರ್ಪಿನ ಪ್ರತಿಯನ್ನು ಜೊತೆಗೆ ತರಬೇಕು ಎಂದು ಆದೇಶಿಸಲಾಯಿತು. ಜಿಲ್ಲೆಯಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನದ ಕುರಿತು ದೂರುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾಹನಗಳಿಗಾಗಿ ಅನುದಾನ ಮಂಜೂರುಗೊಳಿಸುವ ವಿಷಯದಲ್ಲಿ ಕೇರಳ ಸರಕಾರದ ಗಮನ ಸೆಳೆಯುವುದಾಗಿ ಆಯೋಗವು ತಿಳಿಸಿದೆ.
Related Articles
Advertisement