Advertisement

ಸಂಕಷ್ಟದಲ್ಲಿರುವವರಿಗೆ ಸಹಕರಿಸುವುದು ಮನುಷ್ಯ ಧರ್ಮ: ಐಕಳ ಹರೀಶ್‌ ಶೆಟ್ಟಿ

01:55 PM Sep 22, 2021 | Team Udayavani |

ಮುಂಬಯಿ,: ನೆರೆಮನೆಯವರ ಅಥವಾ ಇತ ರರ ಕಷ್ಟಗಳನ್ನು ನೋಡಿ ಏನಾದರೂ ಸಹಾಯ ಮಾಡಲು ಪ್ರಯತ್ನಿಸಬೇಕು. ನೋಡಿಯೂ ನೋಡ ದಂತೆ ನನಗೇಕೆ ಬೇಕು ಬೇಡದ ಕೆಲಸವೆಂದು ಸುಮ್ಮನಿರಬಾರದು. ಇತರರ ಕಷ್ಟವನ್ನು ತನ್ನದೇ ಕಷ್ಟವೆಂದು ಸ್ವೀಕರಿಸಿ ಸಾಧ್ಯವಾದ ಸಹಾಯ ಮಾಡಲು ಪ್ರಯತ್ನಿಸಬೇಕು. ಅದುವೇ ಬದುಕಿನ ಸಾರ್ಥಕತೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಹೇಳಿದರು.

Advertisement

ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಬಾಳೆಪುಣಿ ಸಮೀಪದ ಯರ್ಮಾಜೆ ಎಂಬಲ್ಲಿನ ನಿವಾಸಿ ಜಯಶಂಕರ ನೋಂಡ ಅವರು ಕೆಲಸ ಮಾಡುತ್ತಿರುವಾಗ ಅನಿರೀಕ್ಷಿತವಾಗಿ ಆಘಾತಗೊಂಡು ಪಾರ್ಶ್ವದ ಬಲವನ್ನು ಕಳೆದುಕೊಂಡು ಮಲಗಿದ್ದಲ್ಲಿಯೇ ಕಳೆದ ಎರಡೂವರೆ ವರ್ಷ ಗಳಿಂದ ಇದ್ದು, ತನ್ನ ಅನಾರೋಗ್ಯದಿಂದಾಗಿ ಮನೆ ನಿರ್ಮಾಣ ಮಾಡುವುದಕ್ಕೆ ಅನಾನುಕೂಲವಾದ ಹಿನ್ನೆಲೆಯನ್ನು ಜಾಗತಿಕ ಬಂಟರ ಸಂಘ ಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರ ಬಳಿ ತಮ್ಮ ಅಸಹಾಯಕತೆ ತೋಡಿಕೊಂಡಾಗ ಒಕ್ಕೂಟದ ಸಮಾಜ ಕಲ್ಯಾಣ ಯೋಜನೆ ಯಡಿ ಮನೆಯನ್ನು ಪೂರ್ಣಗೊಳಿಸಿ ಸುಮತಿ ನೊಂಡ ಮತ್ತು ಜಯಶಂಕರ ನೋಂಡ ಅವರಿಗೆ ಹಸ್ತಾಂತರಿಸಲಾಯಿತು. ಜಯಶಂಕರ ನೋಂಡರಿಗೆ ಜಾಗತಿಕ ಬಂಟರ ಸಂಘದ ಮೂಲಕ ಆರೋಗ್ಯ ನೆರವು ನೀಡಿ ಚಿಕಿತ್ಸೆಗಾಗಿ ಪ್ರತೀ ತಿಂಗಳು 5,000 ರೂ. ಗಳನ್ನು ನೀಡುವುದಾಗಿ ಹಾಗೂ ಮಕ್ಕಳ ವಿದ್ಯಾಭ್ಯಾಸದ ಬಗ್ಗೆಯೂ ಸಹಕರಿಸುವುದಾಗಿ ಐಕಳ ಹರೀಶ್‌ ಶೆಟ್ಟಿ ತಿಳಿಸಿದರು.

ನೋಂಡಾ ದಂಪತಿ ಜಾಗತಿಕ ಬಂಟರ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ಮಹತ್ಕಾರ್ಯದಲ್ಲಿ ಬಂಟರ ಸಂಘ ಸಾಲೆತ್ತೂರು ಇದರ ಪದಾಧಿಕಾರಿಗಳ ಜನಮೆಚ್ಚುವ ಕಾರ್ಯವೈಖರಿಗಳನ್ನು ಗುರುತಿಸಿ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಅಗರಿ ಉದಯಕುಮಾರ್‌ ರೈ, ಎಂಜಿನಿಯರ್‌ ಅಕ್ಷಯ್‌ ಕುಮಾರ್‌ ರೈ, ಬದಿಯಾರು ಸೀತಾರಾಮ ಶೆಟ್ಟಿ ಮುಂಬಯಿ, ಸುರೇಶ್‌ ಶೆಟ್ಟಿ ಒಡಿಯೂರು ಅವರನ್ನು ಅಭಿನಂದಿಸಲಾಯಿತು.

ಇದನ್ನೂ ಓದಿ:ವೈಜೆಡ್‌ಎಫ್-ಆರ್‌15 ವಿ4.0 ಯಮಹಾ ಬೈಕುಗಳ ಬಿಡುಗಡೆ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ, ನಮ್ಮ ಸಮುದಾಯದ ದುರ್ಬಲರ ಸಮಸ್ಯೆಗಳಿಗೆ ಸ್ಪಂದಿಸುವುದು ಒಕ್ಕೂಟದ ಧ್ಯೇಯವಾಗಿದೆ. ಇದನ್ನು ಐಕಳ ಹರೀಶ್‌ ಶೆಟ್ಟಿಯವರು ಸಮರ್ಥವಾಗಿ ಕಾರ್ಯರೂಪಕ್ಕೆ ತರುತ್ತಿದ್ದಾರೆ ಎಂದು ಶ್ಲಾಘಿಸಿದರು. ಕೊಳ್ನಾಡು ಗ್ರಾ.ಪಂ. ಉಪಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಕುಳಾಲು ಹಾಗೂ ವಿಟ್ಲಪಟ್ನೂರು ಗ್ರಾ. ಪಂ. ಮಾಜಿ ಅಧ್ಯಕ್ಷರಾದ ರವೀಶ್‌ ಶೆಟ್ಟಿ ಕಾರ್ಕಳ, ಗಣೇಶ್‌ ಶೆಟ್ಟಿ ಬಾರೆಬೆಟ್ಟು ಅವರು ಐಕಳ ಹರೀಶ್‌ ಶೆಟ್ಟಿಯವರ ಜನಪರ ಕಾರ್ಯಕ್ರಮಕ್ಕೆ ಅಭಿನಂದನೆ ಸಲ್ಲಿಸಿದರು.
ಸಾಲೆತ್ತೂರು ವಲಯ ಬಂಟರ ಸಂಘದ ಕಾರ್ಯದರ್ಶಿ ಶಶಿಧರ್‌ ರೈ ಕುಳಾಲು, ಒಕ್ಕೂಟದ ಸದಸ್ಯ ಸುರೇಶ್‌ ಶೆಟ್ಟಿ ಸೂರಿಂಜೆ, ರವಿ ಶೆಟ್ಟಿ ಜತ್ತಬೆಟ್ಟು, ಮಹಿಳಾ ಘಟಕದ ಅಧ್ಯಕ್ಷೆ ವಿಜಯಾ ಬಿ.ಶೆಟ್ಟಿ ಸಾಲೆತ್ತೂರು, ಜಯಶಂಕರ ನೋಂಡ ಉಪಸ್ಥಿತರಿದ್ದರು. ಸಾಲೆತ್ತೂರು ವಲಯದ ಬಂಟರ ಸಂಘದ ಅಧ್ಯಕ್ಷ ದೇವಪ್ಪ ಶೇಖ ಪೀಲ್ಯಡ್ಕ ಪ್ರಸ್ತಾವಿಸಿ ಸ್ವಾಗತಿಸಿದರು. ಶಶಿಧರ ರೈ ಕುಳಾಲು ವಂದಿಸಿ ದರು. ಜಾಗತಿಕ ಬಂಟರ ಸಂಘಗಳ ಮಾಜಿ ಕೋಶಾ ಧಿಕಾರಿ ಬಾಲಕೃಷ್ಣ ರೈ ಕೊಲ್ಲಾಡಿ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next