Advertisement

ಧರ್ಮದಿಂದ ಮಾನವ ನೆಲೆಗಟ್ಟು ಗಟ್ಟಿ –ವಿದ್ಯಾಪ್ರಸನ್ನ ಶ್ರೀಪಾದರು

05:43 PM Apr 02, 2017 | Team Udayavani |

ಹೆಬ್ರಿ : ಧರ್ಮ ನಮ್ಮನ್ನು ಕಾಪಾಡುತ್ತದೆ.ವಿಶೇಷ ಸನ್ನಿಧಾನವಿರುವಂತಹ ಅನಂತ ಪದ್ಮನಾಭನ ಪುಣ್ಯ ಕಾರ್ಯದಲ್ಲಿ ಸೇವೆ ಸಲ್ಲಿಸುವ ಭಾಗ್ಯ ದೊಡ್ಡದು.ಸದಾ ಧರ್ಮಮಾರ್ಗದಲ್ಲಿ ನಡೆಯುವುದರ ಮೂಲಕ ಭಗವಂತನ ವಿಶೇಷ ಕೃಪೆಗೆ ಪಾತ್ರರಾಗಲು ಸಾಧ್ಯ.ಧರ್ಮದಿಂದ ಮಾನವ ನೆಲೆಗಟ್ಟು ಗಟ್ಟಿಯಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಶ್ರೀಪಾದರು ಹೇಳಿದರು.

Advertisement

 ಅವರು ಕಾರ್ಕಳ ತಾಲೂಕಿನ ಹೆಬ್ರಿಯ ಇತಿಹಾಸ ಪ್ರಸಿದ್ಧ  ಶ್ರೀ ಅನಂತಪದ್ಮನಾಭ ದೇವಸ್ಥಾನದ ಅಷ್ಟಬಂಧ ಸಹಿತ ಶ್ರೀ ದೇವರ ಪುನರ್‌ ಪ್ರತಿಷ್ಠೆ ಸಹಸ್ರ ಕಲಶ ಸಹಿತ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಮಹೋತ್ಸವದ ಅಂಗವಾಗಿ ಎ.2ರಂದು ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ  ಪ್ರವಚನ ನೀಡಿದರು.ಕೇವಲ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡರೆ ಮಾತ್ರ ಭಗವಂತನ ಕೃಪೆ ಅಲ್ಲ  ಬ್ರಹ್ಮಕಲಶದ ಬಳಿಕವೂ ಪ್ರತಿಯೊಬ್ಬರು ತಮ್ಮ ಮಕ್ಕಳೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ನಿರಂತರ ಭಗವಂತನ ಸೇವೆಯಲ್ಲಿದ್ದಾಗ ಮಾತ್ರ ದೇವರ ಪೂರ್ಣ ಅನುಗ್ರಹವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಎಚ್‌ ಬಾಲಕೃಷ್ಣ ನಾಯಕ್‌ ವಹಿಸಿದ್ದರು. ಈ ಸಂದರ್ಭದಲ್ಲಿ  ದೇವಸ್ಥಾನದ ಅಭಿವೃದ್ಧಿಯಲ್ಲಿ ಕೈ ಜೋಡಿಸಿದ ದಾನಿಗಳನ್ನು ಸಮ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಆರ್ಥಿಕ ಸಮಿತಿಯ ಅಧ್ಯಕ್ಷ ಎಚ್‌ ಪ್ರಸಾದ್‌ ಬಲ್ಲಾಳ್‌, ಕ್ಷೇತ್ರೇಶರ ತಾರನಾಥ ಬಲ್ಲಾಳ್‌,ಸಮ್ಮಾನ ಸಮಿತಿಯ ಅಧ್ಯಕ್ಷ ಸುಧೀರ್‌ ನಾಯಕ್‌,ಆರ್ಥಿಕ ಸಮಿತಿಯ ಸಂಚಾಲಕ ಎಚ್‌. ಸತೀಶ್‌ ಪೈ,ಪ್ರಚಾರ ಹಾಗೂ ಸಂಪರ್ಕ ಸಮಿತಿಯ ಅಧ್ಯಕ್ಷ ಸೀತಾನದಿ ವಿಠಲ ಶೆಟ್ಟಿç ಮೊದಲಾದವರಿದ್ದರು.ಅರ್ಚಕ ಗಿಲ್ಲಾಳಿ ಪದ್ಮನಾಭ ಆಚಾರ್ಯ ಸ್ವಾಗತಿಸಿ,ಪ್ರಕಟನಾ ಸಮಿತಿಯ ಅಧ್ಯಕ್ಷ ಟಿ.ಜಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿ,ಡಾ| ಭಾರ್ಗವಿ ಐತಾಳ್‌ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next