Advertisement

ಹುಲೇಕಲ್ : ನಟ ಅನಿರುದ್ಧ ಜಾಗೃತಿಗೆ ತೆರವಾಯ್ತು ತ್ಯಾಜ್ಯ !

08:28 PM Mar 21, 2022 | Team Udayavani |

ಶಿರಸಿ : ಜೊತೆ ಜೊತೆಯಲಿ ಧಾರವಾಹಿಯ‌ ಪ್ರಸಿದ್ದ‌ ಆರ್ಯವರ್ಧನ್, ಚಲನಚಿತ್ರ ತಾರೆ ಅನಿರುದ್ದ‌ ತಾಲೂಕಿನ ಹುಲೇಕಲ್ ಗ್ರಾಮ ಪಂಚಾಯತಿ ಪ್ರದೇಶ ತ್ಯಾಜ್ಯಗಳ ಕುರಿತು ತಮ್ಮ ಫೆಸ್ ಬುಕ್ ಗೋಡೆಯಲ್ಲಿ ಚಿತ್ರ ಹಾಕಿಕೊಂಡಿದ್ದ ಬೆನ್ನಲ್ಲೆ ಆ ಪಂಚಾಯ್ತಿ ಅಲ್ಲಿ ಇದ್ದ ತ್ಯಾಜ್ಯ ಸ್ವಚ್ಛಗೊಳಿಸಿದೆ.

Advertisement

ಸಾಮಾಜಿಕ ಜಾಲ ತಾಣದಲ್ಲಿ ಸಖತ್ ವೈರಲ್ ಆದ ಬೆನ್ನಲ್ಲೆ ಈ ಕ್ರಮ ಆಗಿದೆ.

ಸ್ವಚ್ಛತೆಗಾಗಿ‌ ನಾನೂ ಸಹಭಾಗಿ ಎಂಬ ಅಭಿಯಾನವನ್ನು ನಡೆಸುತ್ತಿರುವ ಅನಿರುದ್ದ ಹುಲೇಕಲ್ ಗ್ರಾಮ ಪಂಚಾಯತಿ ಕಟ್ಟಡದಿಂದ ಕೇವಲ 200 ಮೀಟರ್ ದೂರದ ಸೋದೆ ಕ್ರಾಸ್ ನಲ್ಲಿ ಹಾಕಲಾದ ತ್ಯಾಜ್ಯಗಳ ಚಿತ್ರ ಹಾಗೂ ವಿಡಿಯೋ ತಮ್ಮ ಸಾಮಾಜಿಕ ಜಾಲ ತಾಣದ ಗೋಡೆಯಲ್ಲಿ ಹಾಕಿಕೊಂಡಿದ್ದರು. ಇದನ್ನು ಉದಯವಾಣಿ ಕೂಡ ಪ್ರಕಟಿಸಿತ್ತು. ಸೋಮವಾರ ಅನಿರುದ್ದ ತಮ್ಮ ಫೇಸ್ ಬುಕ್ ಪುಟದಲ್ಲಿ ಸ್ವಚ್ಛಗೊಂಡ ಸ್ಥಳದ ಪೊಟೊ ಹಾಕಿಕೊಂಡು ಕೃತಜ್ಞತೆ‌ ಸಲ್ಲಿಸಿದ್ದಾರೆ.

ಮುಂದೆ‌ ಕೂಡ ಪಂಚಾಯ್ತಿಯಿಂದ ಸ್ವಚ್ಛತೆಗೆ ಆದ್ಯತೆ‌ ಸಿಗಲಿ‌ ಎಂಬುದು ಸ್ಥಳೀಯರ ಆಶಯವಾಗಿದೆ.

ಇದನ್ನೂ ಓದಿ : ಹೊಸಲು ಮಾರಮ್ಮದೇವಿ ಜಾತ್ರಾ ಮಹೋತ್ಸವ : ಜೀವಂತ ಕೋಳಿ ಎಸೆದು ಹರಕೆ ತೀರಿಸಿಕೊಂಡ ಭಕ್ತರು

Advertisement
Advertisement

Udayavani is now on Telegram. Click here to join our channel and stay updated with the latest news.

Next