Advertisement

ಕೃಷಿ ಕಾರ್ಮಿಕರ ಕೊರತೆ: ತೊಗರಿ ಕಟಾವು ಯಂತ್ರಕ್ಕೆ ಭಾರಿ ಡಿಮ್ಯಾಂಡ್‌

11:57 AM Dec 15, 2021 | Team Udayavani |

ಕುಷ್ಟಗಿ: ನೀರಾವರಿ ಪ್ರದೇಶಗಳಲ್ಲಿ ಭತ್ತದ ಒಕ್ಕಣೆ ಮುಗಿಯುತ್ತಿದ್ದಂತೆ ರಾಶಿ ಯಂತ್ರಗಳು ಬರದ ನಾಡಿನತ್ತ ಮುಖ ಮಾಡಿವೆ.

Advertisement

ಅಕಾಲಿಕ ಮಳೆಯಿಂದ ಭಾಗಶಃ ಹಾಳಾಗಿದ್ದರೂ ಸಹ ತೊಗರಿ ಕಟಾವು ಮಾಡಲು ಕೃಷಿ ಕಾರ್ಮಿಕರ ಕೊರತೆಯಿಂದಾಗಿ ರೈತರು ಯಂತ್ರದ ಮೊರೆ ಹೋಗಿದ್ದು ತೊಗರಿ ಕಟಾವು ಯಂತ್ರಕ್ಕೆ ಭಾರಿ ಡಿಮ್ಯಾಂಡ್‌ ಬಂದಿದೆ.

ಸದ್ಯದ ಮೋಡ ಕವಿದ ವಾತರಣದಲ್ಲಿ ಯಾವಾಗ ಅಕಾಲಿಕ ಮಳೆ ಬರಯತ್ತದೆಯೋ ಗೊತ್ತಿಲ್ಲ. ಈ ಸಂದರ್ಭದಲ್ಲಿ ತೊಗರಿ ಕಟಾವು ಮಾಡುವುದು ಸೂಕ್ತವಾಗಿದೆ. ಹಿರೇಮನ್ನಾಪುರ, ನವಲಹಳ್ಳಿ, ಗುಮಗೇರಾ,ಹಂಚಿನಾಳ ಮೊದಲಾದ ಪ್ರದೇಶದಲ್ಲಿ ಈಗಾಗಲೇ ತೊಗರಿ ಒಕ್ಕಣೆ  ಶುರುವಾಗಿದೆ.

ಕುಷ್ಟಗಿ ತಾಲೂಕಿನ 12,500 ಹೆಕ್ಟೇರ್ :

ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. ಆರಂಭದಲ್ಲಿ ಚೆನ್ನಾಗಿಯೇ ಬಂದ ತೊಗರಿಗೆ ಹೂವು, ಕಾಯಿ ಕಟ್ಟಿ ಒಣಗುವ ಸಂದರ್ಭದಲ್ಲಿ ಅಕಾಲಿಕ ಮಳೆಗೆ ತುತ್ತಾಗಿದೆ. ಅಳಿದುಳಿದ ತೊಗರಿ ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಬೆಂಬಿಡದ ಮಳೆ ಮತ್ತು ಮುಸುಕಿನ ವಾತಾವರಣದಿಂದ ತೊಗರಿ ಕಾಯಿಯೊಳಗೆ ಮೊಳಕೆಯೂಡೆದು ರೈತರು‌ ಮತ್ತೆ ನಷ್ಟ ಅನುಭವಿಸುವ ಆತಂಕ ಮನೆ ಮಾಡಿದೆ.

Advertisement

ಕಳೆದ ಒಂದು ವಾರದಿಂದ ಅರೆ ಬರೆ ಬಿಸಿಲು ಕಾಣಿಸಿಕೊಂಡಿದ್ದರಿಂದ ತೊಗರಿ ಕಟಾವಿಗೆ ಕೂಲಿಕಾರರ ಕೊರತೆ ಕಾಡಿದೆ.  ರೈತರು ಅನಿವಾರ್ಯವಾಗಿ ತೊಗರಿ ಕಟಾವು ಯಂತ್ರಗಳ ನಿರೀಕ್ಷೆಯಲ್ಲಿದ್ದಾರೆ.

ಹೊರ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳ ರಾಶಿ ಯಂತ್ರಗಳು ನೀರಾವರಿ ಪ್ರದೇಶದಲ್ಲಿ ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಸದ್ಯ ಮುಗಿಯುತ್ತಿದ್ದಂತೆ ತೊಗರಿ ರಾಶಿ ಯತ್ತ ಮುಖ ಮಾಡಿವೆ.  ಎಕರೆಗೆ 1200ರೂ.ದಿಂದ 1300ರೂ ವರೆಗೆ ಕಟಾವು ಮಾಡಲಾಗುತ್ತಿದೆ ಎಂದು ತೊಗರಿ ಬೆಳೆದ ಬಸನಗೌಡ ಎನ್ ಪಾಟೀಲ, ಸುರೇಶ ಮಂಗಳೂರು ತಿಳಿಸಿದರು.

ತೊಗರಿ ಹೊಟ್ಟಿಗೆ ಡಿಮ್ಯಾಂಡ್:

ಈ ಯಂತ್ರಗಳ ಮೂಲಕ ಕಟಾವು ಮಾಡಿದರೆ ತೊಗರಿ ಹೊಟ್ಟು ನೆಲಕ್ಕೆ ಚಲ್ಲಾಡುತ್ತದೆ. ಇದರಿಂದ ಜಾನುವಾರುಗಳಿಗೆ ಹಲವು ವರ್ಷಗಳವರೆಗೆ ಸಂಗ್ರಹಿಸಿಡುವುದು ಅಸಾದ್ಯವೆನಿಸಿದೆ. ಬದಲಾದ ಪರಿಸ್ಥಿತಿಯಲ್ಲಿ ಮತ್ತೆ ಅಕಾಲಿಕ ಮಳೆಯ ಬಗ್ಗೆ ಹವಮಾನದ ಮುನ್ಸೂಚನೆ ನೀಡಿದ್ದು ಅಷ್ಟರೊಳಗೆ ಕಟಾವು ಮುಗಿಸುವ ದಾವಂತದಲ್ಲಿರುವ ರೈತರು ಅನಿವಾರ್ಯ ಪರಿಸ್ಥಿತಿಯಲ್ಲಿ ತೊಗರೆ ಹೊಟ್ಟಿನ ಬಗ್ಗೆ ಗಮನ ಕಡಿಮೆಯಾಗುತ್ತಿದೆ.

ವರದಿ: ಮಂಜುನಾಥ ಮಹಾಲಿಂಗಪುರ ಕುಷ್ಟಗಿ

Advertisement

Udayavani is now on Telegram. Click here to join our channel and stay updated with the latest news.

Next