Advertisement

ರಾಜ್ಯದಲ್ಲಿ ಹುಚ್ ಮಹಮದನ ಸರ್ಕಾರ: ಓಸಿ ಚೀಟಿ ತರ ಅನುದಾನ ಕೇಳಿದರೆ ಬೆಲೆ ಇಲ್ಲ!- ಅನಂತಕುಮಾರ

06:23 PM Dec 26, 2023 | Team Udayavani |

ಶಿರಸಿ: ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಹುಚ್ ಮಹಮದ್‌ನ ಸರಕಾರ. ದಿವಾಳಿಕೋರ ಸರಕಾರವಿದು. ಇದು ಮುಂದುವರಿದರೆ ಕರ್ಣಾಟಕಕ್ಕೆ ನೆಮ್ಮದಿ ಇಲ್ಲ. ಓಸಿ ಚೀಟಿ ತರ ಅನುದಾನಕ್ಕೆ ಯೋಜನೆ ಕಳಿಸಿದರೆ ಅದಕ್ಕೆ ಕೇಂದ್ರ ಬೆಲೆ ಕೊಡುವದಿಲ್ಲ ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಸಂಪೂರ್ಣ ಆರ್ಥಿಕತೆ ಬದಿಗೊತ್ತಿ, ಕಾಂಗ್ರೆಸ್ಸಿಗರು ಅವರ ಚುನಾಚಣೆ ಘೋಷಣೆ ತೀರಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವದು ಕರ್ನಾಟಕ ಜನತೆಗೆ ಮಾಡುತ್ತಿರುವ ದೊಡ್ಡ ದ್ರೋಹ. ಜನರನ್ನು ಉಚಿತವಾಗಿ ಏನೋ ಕೊಡುತ್ತಿರುವ ಹೆಸರಿನಲ್ಲಿ ಬಹು ಸಂಖ್ಯಾತ ಜನರನ್ನು ವಂಚವಿಸುತ್ತಿರುವ ಸರಕಾರ. ಅಭಿವೃದ್ಧಿಗೆ, ಸರಕಾರದ ನಿರಂತರ ಕಾರ್ಯಕ್ರಮಗಳಿಗೆ, ಶಾಸಕರಿಗೇ ಕೊಡಲು ಅನುದಾನ ಇಲ್ಲ, ಹಣವಿಲ್ಲದ ಸ್ಥಿತಿಗೆ ಬಂದಿದೆ ಎಂದು ವಾಗ್ದಾಳಿ ನಡೆಸಿ ಉಚಿತವಾಗಿ ಕೊಡಬಾರದು ಎಂಬುದಲ್ಲ, ಆದರೆ ಅದನ್ನು ಆರ್ಥಿಕ ಸ್ಥಿತಿ ನೋಡಿ ಕೆಲಸ ಮಾಡಬೇಕು ಎಂದರು.

ಸೋಗಲಾಡಿ ಸಿದ್ಧರಾಮಯ್ಯನವರ ಯೋಜನೆಯನ್ನು ಯಾರೂ ಒಪ್ಪುವುದಿಲ್ಲ. ಸರಿಯಾದ ರೀತಿಯಲ್ಲಿ ಆರ್ಥಿಕ ಯೋಜನೆ ಸಿದ್ಧಪಡಿಸಿ ನೀಡಿದರೆ ಕೇಂದ್ರ ಸರ್ಕಾರ ಒಪ್ಪಿಕೊಳ್ಳುತ್ತದೆ. ಓಸಿ ಚೀಟಿ ತರ ಯೋಜನೆಗಳನ್ನು ಕಳುಹಿಸಿದರೆ ಅದಕ್ಕೆ ಕೇಂದ್ರ ಬೆಲೆ ನೀಡುವುದಿಲ್ಲ. ಕೇಂದ್ರ ಸರಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದ್ದಾರೆ. ಪ್ರತೀ ಖರ್ಚಿಗೂ ಸರಿಯಾದ ಲೆಕ್ಕ ಕೇಳುತ್ತದೆ. ದಿಕ್ಕು ದೆಸೆ ಇಲ್ಲದ ಯೋಜನೆಗಳಿಗೆ ನೆರವಾಗುವದಿಲ್ಲ. ಜನರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಚೌಕಟ್ಟಿನಲ್ಲಿ ಸಿದ್ಧಪಡಿಸಿದರೆ ಸಲ್ಲಿಸಿದರೆ ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುತ್ತದೆ. ಮನಸ್ಸಿಗೆ ಬಂದ ಹಾಗೇ ಹಣ ಕೇಳಿದರೆ ಅದು ಸಿದ್ದರಾಮಯ್ಯನವರ ಅಪ್ಪನ ಆಸ್ತಿಯಲ್ಲ. ಎಂದರು.

ಸಂಸತ್‌ನಲ್ಲಿ ಬೇಡದಿರುವ ಕೆಲಸ ಮಾಡಿದರೆ ಅಮಾನತ್ ಆಗುವುದು ಸಹಜ. ಸಂಸತ್‌ಗೆ ಅದರದ್ದೆ ಆದ ಗೌರವವಿದೆ. 142 ಸಂಸದರನ್ನು ಅಮಾನತು ಮಾಡಿರುವ ಬಗ್ಗೆ ಕಾಂಗ್ರೆಸ್ ನಾಯಕರನ್ನು ಕೇಳಬೇಕು. ಯಾಕೆ ಅವಮಾನ ಆಗಿದೆ ಎಂದು. ಸಂಸತ್ತಿನ ಘನತೆಗೆ ಚ್ಯುತಿ ತಂದರೆ ಸಭಾಧ್ಯಕ್ಷರು ಅವರದ್ದೇ ಆದ ತೀರ್ಮಾನ ಕೈಗೊಳ್ಳುತ್ತಾರೆ ಎಂದ ಅವರು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ ಅವರದ್ದು ಬೂಟ್ ನೆಕ್ಕುವ ಸಂಸ್ಕೃತಿ ಎಂಬಷ್ಟರ ಮಟ್ಟಿಗೆ ಆಗಿದೆ ಎಂದೂ ಹೇಳಿದರು.

ಇದನ್ನೂ ಓದಿ: 2024 Poll:1977ರಲ್ಲಿ PM ಅಭ್ಯರ್ಥಿ ಘೋಷಿಸದೇ ಕಾಂಗ್ರೆಸ್‌ ವಿರುದ್ಧ ವಿಪಕ್ಷ ಜಯ ಗಳಿಸಿತ್ತು!

Advertisement

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೂರರಲ್ಲಿ ಎರಡಂಶಕ್ಕಿಂತ ಜಾಸ್ತಿ ಸ್ಥಾನ ಬರುತ್ತದೆ. ಮುಂದೆ ದಿವಾಳಿಕೋರರ ಸರ್ಕಾರ ಇರಲು ಸಾಧ್ಯವಿಲ್ಲ ಎಂದ ಅನಂತ್, ಐಎನ್‌ಡಿಐಎ ಎಂಬುದನ್ನು ಕಟ್ಟಿಕೊಂಡು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ದೇಶಕ್ಕೋಸ್ಕರ ದಾನ ಮಾಡಿ ಅಂದರು. ಅದರ ಅರ್ಥ ದೇಶವನ್ನು ಕಾಂಗ್ರೆಸ್ ಗುತ್ತಿಗೆ ಪಡೆದಿದೆಯೇ? ಕಾಂಗ್ರೆಸ್‌ಗೆ ಹಣ ಬೇಕು ಎಂದು ನೇರವಾಗಿ ಕೇಳಲಿ. 75 ವರ್ಷಗಳಲ್ಲಿ ಚೀಪ್ ಪಬ್ಲಿಸಿಟಿ ಪಾಲಿಟಿಕ್ಸ್ ಮಾಡಿ ಜನರನ್ನು ಮೂರ್ಖರನ್ನಾಗಿ ಮಾಡಿದೆ. ಆದರೆ ಬಿಜೆಪಿಯು ರೈತರಿಗೆ, ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕೈಗಾರಿಕಾ, ವ್ಯಾಪಾರ, ಅಂತಾರಾಷ್ಟ್ರೀಯ ವ್ಯಾಪಾರದ ಆರ್ಥಿಕ ಸುಭದ್ರತೆಯ ನೆಲೆಗಟ್ಟಿನಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಜಾತಿ ದೇಶವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮೊದಲಿನಿಂದಲೂ ಮಾಡುತ್ತಿದ್ದು, ದೇಶ ಒಡೆಯುವ ಶಡ್ಯಂತರ ಏನು ಬೇಕಾದರೂ ಮಾಡಬಹುದು. ಇದರ ಕುರಿತು ಎಚ್ಚರಿಕೆ ವಹಿಸಬೇಕಾಗಿದೆ ಎಂದರು.

ಸಚಿವ ಜಮೀರ್ ಅಹಮ್ಮದ್ ಹೇಳಿಕೆ ಹೇಳಿಕೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಅವರಿಗೆ ಸಿಕ್ಕಿರುವ ಸಂಸ್ಕಾರ. ಮತೀಯ ವಿಚಾರ ನಾವ್ಯಾರು ಮಾಡಲು ಸಾಧ್ಯವಿಲ್ಲ. ಅವರ ಯೋಗ್ಯತೆ ತಕ್ಕಂತೆ ಹೇಳುತ್ತಾರೆ ಎಂದೂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next