Advertisement

ಆರ್‌.ಆರ್‌.ನಗರ: ವೆಂಕಟ್‌ಗೆ ಸಿಕ್ಕ ಮತಗಳೆಷ್ಟು? ಪ್ರತಿಕ್ರಿಯೆ ಏನು? 

04:31 PM May 31, 2018 | Team Udayavani |

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಶಾಸಕ ಮುನಿರತ್ನ ವಿರುದ್ಧ ಸಮರ ಸಾರಿ , ಅವಕಾಶ ಸಿಕ್ಕಾಗೆಲ್ಲಾ ವಾಗ್ಧಾಳಿ ನಡೆಸಿ ಚುನಾವಣಾ ಸ್ಪರ್ಧೆಗಿಳಿದಿದ್ದ ನಟ ಹುಚ್ಚ ವೆಂಕಟ್‌ ಹೀನಾಯವಾಗಿ ಸೋಲು ಅನುಭವಿಸಿದ್ದಾರೆ. 

Advertisement

ಚಲಾವಣೆಯಾದ 2,56,444 ಮತಗಳ ಪೈಕಿ ಹುಚ್ಚ ವೆಂಕಟ್‌ ಕೇವಲ 764 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹುಚ್ಚ ವೆಂಕಟ್‌ ‘ನಾನು ಸೋತಿಲ್ಲ. ಕ್ಷೇತ್ರದ ಜನತೆ ಸೋತಿದ್ದಾರೆ. ನಾನು ಹಣ ಹಂಚಿಲ್ಲ .ಹೆಂಡ ಹಂಚಿಲ್ಲ, ಕುಕ್ಕರ್‌ ಹಂಚಿಲ್ಲ. ನನ್‌ ಯಕ್ಡಾ ಕೂಡ ಅಂತಾ ವೋಟುಗಳನ್ನು ಕೇಳಲ್ಲಾ’ ಎಂದು ಕಿಡಿ ಕಾರಿದರು. 

ಕ್ಷೇತ್ರದಲ್ಲಿ ನೊಟಾಗೆ 2,724 ಮತಗಳು ಚಲಾವಣೆಯಾಗಿವೆ. 

ಕಾಂಗ್ರೆಸ್‌ ಅಭ್ಯರ್ಥಿ, ಶಾಸಕ ಮುನಿರತ್ನ  ನಾಯ್ಡು  ಅವರು ಬಿಜೆಪಿಯ ತುಳಸಿ ಮುನಿರಾಜು ಗೌಡ ವಿರುದ್ಧ  25,492 ಮತಗಳ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ 2 ನೇ ಬಾರಿಗೆ ವಿಧಾನ ಸಭೆಗೆ ಪ್ರವೇಶಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next