Advertisement

ಉಗ್ರರ ಗುಂಡಿಗೆ ಹುಬ್ಬಳ್ಳಿ ಯೋಧ ಹುತಾತ್ಮ

10:52 PM Oct 01, 2019 | Lakshmi GovindaRaju |

ಧಾರವಾಡ: ಜಮ್ಮು-ಕಾಶ್ಮೀರ ಗಡಿಯಲ್ಲಿ ಉಗ್ರರ ಜೊತೆಗೆ ನಡೆದ ಗುಂಡಿನ ದಾಳಿಯಲ್ಲಿ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರದ ಮಂಜುನಾಥ ಹನುಮಂತಪ್ಪ ಓಲೇಕಾರ (29) ಎಂಬ ಯೋಧ ಹುತಾತ್ಮನಾಗಿದ್ದಾನೆ. ಹುತಾತ್ಮ ಯೋಧ ಮಂಜುನಾಥ ಕಳೆದ 9 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು.

Advertisement

20ನೇ ವರ್ಷದಲ್ಲಿ ಯೋಧನಾಗಿ ಸೇವೆ ಆರಂಭಿಸಿದ್ದ ಅವರು, 6 ತಿಂಗಳ ಹಿಂದಷ್ಟೇ ವಿವಾಹವಾಗಿ ಕರ್ತವ್ಯಕ್ಕೆ ಮರಳಿದ್ದರು. ಯೋಧ ಹುತಾತ್ಮನಾಗಿರುವ ಬಗ್ಗೆ ಡೀಸಿ ದೀಪಾ ಚೋಳನ್‌ ಅವರಿಗೆ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗ್ರಾಮಕ್ಕೆ ಹುಬ್ಬಳ್ಳಿ ತಹಶೀಲ್ದಾರ್‌ ಸಂಗಪ್ಪ ಭೇಟಿ ನೀಡಿದ್ದಾರೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next