Advertisement

ಹುಬ್ಬಳ್ಳಿ: ಲಾರಿಗೆ ಎರಡು ಬೈಕ್ ಗಳು ಢಿಕ್ಕಿಯಾಗಿ ಮೂವರು ಯುವಕರ ದುರ್ಮರಣ

01:57 PM Aug 26, 2022 | Team Udayavani |

ಹುಬ್ಬಳ್ಳಿ: ನಗರದ ಹೊರವಲಯದ ತಾರಿಹಾಳ ಬಳಿಯ ಮೆಹಬೂಬ ಡಾಬಾದ ಹತ್ತಿರ ಗುರುವಾರ ರಾತ್ರಿ ನಿಂತಿದ್ದ ಲಾರಿಗೆ ಎರಡು ಬೈಕ್ ಗಳು ಢಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದಾರೆ.

Advertisement

ಅಪಘಾತದಲ್ಲಿ ಸೆಟ್ಲಮೆಂಟ್ ನಿವಾಸಿಗಳಾದ ಸುನಿಲ ಭಜಂತ್ತಿ (25), ಮಂಜುನಾಥ ಕ್ಯಾರಕಟ್ಟಿ (35), ವಿನೋದ ಕ್ಯಾರಕಟ್ಟಿ (30) ಮೃತಪಟ್ಟಿದ್ದು, ಪರಶುರಾಮ ನಿಟ್ಟೂರ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಗೌಂಡಿ ಕೆಲಸ ಮಾಡಿಕೊಂಡು ತಾರಿಹಾಳದಿಂದ ನಗರಕ್ಕೆ ಪ್ರತ್ಯೇಕವಾಗಿ ಎರಡು ಬೈಕ್ ಗಳಲ್ಲಿ ಬರುತ್ತಿದ್ದಾಗ ಈ ಅವಘಡ ನಡೆದಿದೆ. ಸ್ಥಳದಲ್ಲೇ ಸುನಿಲ ಮತ್ತು ಮಂಜುನಾಥ ಮೃತಪಟ್ಟರೆ, ಕಿಮ್ಸ್ ನಲ್ಲಿ ದಾಖಲಾಗಿದ್ದ ವಿನೋದನು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ. ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next