Advertisement

Hubli; ನಾಲ್ಕು ಗ್ಯಾರೇಜ್‌ ಗಳಲ್ಲಿ ಕಬ್ಬಿಣ ಕದ್ದಿದ್ದ ಮೂವರ ಬಂಧನ

12:28 PM Jul 21, 2024 | Team Udayavani |

ಹುಬ್ಬಳ್ಳಿ: ತಾಲೂಕಿನ ತಾರಿಹಾಳ ಗ್ರಾಮದ ಕೈಗಾರಿಕಾ ವಸಾಹತು ಪ್ರದೇಶದಲ್ಲಿನ ನಾಲ್ಕು ಕೈಗಾರಿಕಾ ಗ್ಯಾರೇಜ್‌ ಗಳಲ್ಲಿ ಕಬ್ಬಿಣದ ಸಾಮಗ್ರಿ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಕದ್ದಿದ್ದ ಮೂವರನ್ನು ಬಂಧಿಸಿರುವ ಪೊಲೀಸರು, ಗೂಡ್ಸ್ ವಾಹನ ಸೇರಿದಂತೆ 4.39 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಘಟನೆ ನಡೆದ 48 ಗಂಟೆಗಳಲ್ಲಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ‌. ಇಲ್ಲಿನ ಉಣಕಲ್ಲನ ಕರಿಯಪ್ಪ ತಳವಾರ, ಸುನೀಲ ಕಟ್ಟಿಮನಿ, ಸಂಗಮೇಶ ಬಬಲೇಶ್ವರ ಬಂಧಿತರಾದವರು.

ಇವರು ಗುರುವಾರ ತಡರಾತ್ರಿ ತಾರಿಹಾಳದ ನಾಲ್ಕು ಕೈಗಾರಿಕಾ ಗ್ಯಾರೇಜ್‌ ಗಳಲ್ಲಿ ಅಂದಾಜು 1.39 ಲಕ್ಷ ರೂ. ಮೌಲ್ಯದ ಕಬ್ಬಿಣದ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಠಾಣೆಯ ಇನ್ಸ್‌ಪೆಕ್ಟರ್ ಮುರುಗೇಶ ಚನ್ನಣ್ಣವರ ನೇತೃತ್ವದಲ್ಲಿ ಪಿಎಸ್ಐಗಳಾದ ವಿ.ಎಸ್. ಬೆಳಗಾಂವಕರ, ಸಚಿನ ಆಲಮೇಲಕರ ಹಾಗೂ ಸಿಬ್ಬಂದಿಗಳ ತಂಡವು ಮೂವರನ್ನು ಶನಿವಾರ ಬಂಧಿಸಿ, ಅವರಿಂದ ಕಳ್ಳತನ ಮಾಡಿದ್ದ ವಸ್ತುಗಳು ಹಾಗೂ ಇದಕ್ಕಾಗಿ ಬಳಸಿದ್ದ ಗೂಡ್ಸ್ ವಾಹನ ವಶಪಡಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next