Advertisement

ಹುಬ್ಬಳ್ಳಿ: ಲಾಭ ಗಳಿಸಬಹುದೆಂದು ನಂಬಿಸಿ ಹಣ ವರ್ಗಾಯಿಸಿ ವಂಚನೆ

11:03 AM Mar 12, 2024 | |

ಉದಯವಾಣಿ ಸಮಾಚಾರ
ಹುಬ್ಬಳ್ಳಿ: ನಗರದ ವ್ಯಾಪಾರಿಗೆ ಖದೀಮರು ಗ್ಲೋಬುಲೆ ಇನ್ವೆಸ್ಟರ್‌ ಸ್ಟಾಕ್‌ ಟ್ರೇಡರ್ಸ್‌ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದೆಂದು ನಂಬಿಸಿ, 3.32ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

Advertisement

ಕೇಶ್ವಾಪುರ ಭವಾನಿ ನಗರದ ವ್ಯಾಪಾರಿ ವಿಫುಲ ಮೋಸಗೊಂಡವರು. ಇವರ ಟೆಲಿಗ್ರಾಂಗೆ ಆನ್‌ಲೈನ್‌ ಟ್ರೇಡಿಂಗ್‌ ಬಗ್ಗೆ ಸಂದೇಶ ಬಂದಿದೆ. ಅದರಲ್ಲಿ ಅಪರಿಚಿತರು ಪರಿಚಯಿಸಿಕೊಂಡು ಹಣ ಹೂಡಿಕೆ ಮಾಡಿ ಸ್ಟಾಕ್‌ ಖರೀದಿಸಿ ಹೆಚ್ಚಿನ ಲಾಭ ಗಳಿಸಬಹುದೆಂದು ನಂಬಿಸಿದ್ದಾರೆ. ಮೊದಲು 10 ಸಾವಿರ ರೂ. ಹೂಡಿಕೆ ಮಾಡಿದಾಗ ಶೇ.5 ಲಾಭಾಂಶ ನೀಡಿದ್ದಾರೆ. ಹೆಚ್ಚಿಗೆ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದೆಂದು ಹೇಳಿ ಲಿಂಕ್‌ ಕಳುಹಿಸಿ, ಆ್ಯಪ್‌ ಡೌನ್‌ಲೋಡ್‌ ಮಾಡಿಸಿ ಹಂತ ಹಂತವಾಗಿ ತಮ್ಮ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನಾಭರಣವಿದ್ದ ಬ್ಯಾಗ್‌ ಕಳವು: ಹೈದ್ರಾಬಾದ್‌ ಘಟ್ಟಕೆಸರದ ನರ್ಸ್‌ವೊಬ್ಬರು ಇಲ್ಲಿನ ರೈಲ್ವೆ ನಿಲ್ದಾಣದ ಪೇಡ್‌ ವೇಟಿಂಗ್‌ ಹಾಲ್‌ನಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಮಾಡಿ ವಾಶ್‌ ರೂಮ್‌ಗೆ ಹೋಗಿ ಬರುವಷ್ಟರಲ್ಲಿ ಖದೀಮರು, ಅಂದಾಜು 85ಸಾವಿರ ಮೌಲ್ಯದ ನಗ-ನಾಣ್ಯವಿದ್ದ ಬ್ಯಾಗ್‌ ಕಳುವು ಮಾಡಿದ್ದಾರೆ. ವೆಮಲಾ ಇಂದಿರಾ ಎಂಬುವರು ಕುಟುಂಬದವರೊಂದಿಗೆ
ಮುಡೇìಶ್ವರಕ್ಕೆ ತೆರಳಲೆಂದು ರವಿವಾರ ಬೆಳಗಿನ ಜಾವ ನಗರಕ್ಕೆ ಆಗಮಿಸಿ ವಿಶ್ರಾಂತಿ ಪಡೆದು, ವಾಶ್‌ ರೂಮ್‌ಗೆಂದು 18ಗ್ರಾಂ ಚಿನ್ನಾಭರಣ, ಮೊಬೈಲ್‌ ಫೋನ್‌, 3ಸಾವಿರ ರೂ., ವಿವಿಧ ದಾಖಲಾತಿಗಳಿದ್ದ ಕಾಲೇಜ್‌ ಬ್ಯಾಗ್‌ ಅನ್ನು ಸೋಪಾ ಚೇರ್‌ ಮೇಲಿಟ್ಟು ಬರುಷ್ಟರಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರಿಕೆಟ್‌ ಬೆಟ್ಟಿಂಗ್‌-ಓರ್ವನ ಬಂಧನ: ಇಲ್ಲಿನ ವಿದ್ಯಾನಗರ ಕಿಮ್ಸ್‌ನ ಹಿಂಬದಿ ಗೇಟ್‌ ಬಳಿ ರವಿವಾರ ಸಂಜೆ ಕ್ರಿಕೆಟ್‌ ಬೆಟ್ಟಿಂಗ್‌ ಓರ್ವನನ್ನು ಪೊಲೀಸರು ಬಂಧಿಸಿ, ಆತನಿಂದ 1,500ರೂ. ವಶಪಡಿಸಿಕೊಂಡಿದ್ದು, ನಾಲ್ವರು ಪರಾರಿಯಾಗಿದ್ದಾರೆ. ದೆಹಲಿಯ ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಾಟಾ ಡಬ್ಲ್ಯು ಪಿಎಲ್‌-2024 ಟಿ-20 ಕ್ರಿಕೆಟ್‌ ಪಂದ್ಯಾವಳಿ ಅಂಗವಾಗಿ ರವಿವಾರ ರಾಯಲ್‌ ಚಾಲೆಂಜರ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ನಡುವಿನ ಪಂದ್ಯದ ವೇಳೆ ಇಲ್ಲಿನ ಕಿಮ್ಸ್‌ ಬಳಿ 4-5 ಜನರ ತಂಡ ಬೆಟ್ಟಿಂಗ್‌ ಆಡುತ್ತಿದ್ದಾಗ ಓರ್ವ ಸಿಕ್ಕಿ ಬಿದ್ದಿದ್ದು, ನಾಲ್ವರು ಪರಾರಿಯಾಗಿದ್ದಾರೆಂದು ಮೂಲಗಳು ತಿಳಿಸಿವೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಾಳು ಸಾವು: ಬೈಕ್‌ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿ ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ ಕಿಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಅವಘಡದಲ್ಲಿ ಜಾರ್ಖಂಡ್‌ ಗುಮ್ಲಾ ಜಿಲ್ಲೆ ಚಿಚ್ಚುವಾನಿ ಕಟಕಾಯಿಯ ಸುಕೇಶ ಮಹೇಂದ್ರ ಭಗತ (24) ಮೃತಪಟ್ಟಿದ್ದಾರೆ. ತಾಲೂಕಿನ ರೇವಡಿಹಾಳ ಬಳಿಯ ಗ್ಲೋಬಲ್‌ ವುಡ್‌ ಪ್ಯಾಕರ್ಸ್‌ ಫ್ಯಾಕ್ಟರಿ ಹತ್ತಿರ ಫೆ.11ರಂದು ರಾತ್ರಿ ಬೈಕ್‌ವೊಂದರ ಸವಾರ ನಡೆದುಕೊಂಡು ಹೋಗುತ್ತಿದ್ದ ಸುಕೇಶಗೆ ಡಿಕ್ಕಿ ಹೊಡೆದುಕೊಂಡು ಹೋಗಿದ್ದ. ಈ ವೇಳೆ ಗಂಭೀರ ಗಾಯಗೊಂಡಿದ್ದ ಈತನನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದಾಗ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next